ಹುಳಿಯಾರು:ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 5 ಕಡೆಯ ಸಿಸಿ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಒಂದೇ ದಿನ ಭೂಮಿ ಪೂಜೆ ನೆರವೇರಿಸಿದರು.ಇಲ್ಲಿನ ನುರಾನಿ ಮಸೀದಿ ಹತ್ತಿರ ಮತ್ತು ವಠಾರಕ್ಕೆ ಹೋಗುವ ಮುಖ್ಯರಸ್ತೆಗೆ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ, ಕೆಂಚಮ್ಮ ದೇವಸ್ಥಾನ ರಸ್ತೆಗೆ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ವೈ.ಎಸ್.ಪಾಳ್ಯದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ತಿಪಟೂರು ರಸ್ತೆಯಲ್ಲಿ 20 ಲಕ್ಷ ರೂ. ಸಿಸಿ ರಸ್ತೆ, ವಳಗೆರೆಹಳ್ಳಿಯಲ್ಲಿ 15 ಲಕ್ಷ ರೂ. ಸಿಸಿ ರಸ್ತೆಗೆ ಸಚಿವರು ಭೂಮಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಪಪಂ ಮಾಜಿ ಸದಸ್ಯರುಗಳಾದ ಬಡ್ಡಿ ಪುಟ್ಟರಾಜು, ಹೇಮಂತ್, ಗುತ್ತಿಗೆದಾರ ನಂದಿಹಳ್ಳಿ ಶಿವಣ್ಣ, ಬರಕನಹಾಲ್ ವಿಎಸ್ಎಸ್ಎನ್ ಅಧ್ಯಕ್ಷ ಶಿವಕುಮಾರ್, ದಾಸಪ್ಪ, ತೋಟದಮನೆ ಜಯಣ್ಣ, ಪಾತ್ರೆಪರಮೇಶ್, ಯುನೂಸ್, ಮೋಹನಕುಮಾರ್, ಚನ್ನಕೇಶವ ಮತ್ತಿತರರು ಇದ್ದರು.