ಕುಂದಗೋಳ ಟಿಕೆಟ್ 5 ಕೋಟಿಗೆ ಸೇಲ್.!

ಕುಂದಗೋಳ ಟಿಕೆಟ್ 5 ಕೋಟಿಗೆ ಸೇಲ್.!

ಹುಬ್ಬಳ್ಳಿ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಕುಂದಗೋಳ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ 5 ಕೋಟಿಗೆ ಸೇಲಾಗಿದೆ, ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಸಿ.ಎಸ್.ಶಿವಳ್ಳಿ ಪತ್ನಿ ಕುಸುಮಾವತಿ ಬೆಂಬಲಿಗರೊಬ್ಬರು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿಕೊಂಡು ಬಂದಿದ್ದಾರೆಂದು ಕಾಂಗ್ರೆಸ್ ಬಂಡಾಯ ನಾಯಕ ಶಿವಾನಂದ ಬೆಂತೂರ ಆರೋಪಿಸಿದ್ದು,ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಿವನಾಂದ ಬೆಂತೂರು ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ಟಿಕೆಟ್ ಸಿಗದ ಸಿಟ್ಟಿನಿಂದ ಆವೇಶದಿಂದ 5ಕೋಟಿ ನೀಡಿದ್ದರು ಎಂದಿದ್ದೆ. ಕುಸುಮಾವತಿ ಯಾರಿಗೂ ಹಣ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಂದುಗೋಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಶಿವನಾಂದ ಬೆಂತೂರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬೆಂಬಲಿಗರು ಕೈಕೊಟ್ಟದ್ದು ಹಾಗೂ ವರಿಷ್ಠರ ಒತ್ತಡ ಹೆಚ್ಚಿದ ಕಾರಣ ಕೊನೆಗೆ ಗುರುವಾರವಷ್ಟೇ ನಾಮಪತ್ರ ವಾಪಸ್ ಹಿಂಪಡೆದಿದ್ದರು. ಏತನ್ಮಧ್ಯೆ ಬೆಂಬಲಿಗರನ್ನುದ್ದೇಶಿಸಿ ಅವರು ಬಹಿರಂಗವಾಗಿ ಮಾತನಾಡಿದ್ದು, ಆ ವೇಳೆ ಕುಸುಮಾವತಿ ಶಿವಳ್ಳಿ ಅವರಿಗಾಗಿ ಯಲ್ಲಪ್ಪ ಎಂಬುವವರು .5 ಕೋಟಿ ರೂ ಕೊಟ್ಟು ಟಿಕೆಟ್ ಖರೀದಿಸಿದ್ದಾರೆ. ಇದರಲ್ಲಿ ಕುಸುಮಾವತಿ ಅವರ ತಪ್ಪಿಲ್ಲ, ಕುಸುಮಾವತಿ ಗೆದ್ದರೆ ಯಲ್ಲಪ್ಪ, ಇತರೆ ಚೇಲಾಗಳೇ ಲೂಟಿ ಹೊಡೆಯುತ್ತಾರೆ. ಹೀಗಾಗಿ ಕುಸುಮಾವತಿ ಸೋಲಿಸಿ ಎಂದು ಕರೆ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos