“ಕುಮಾರಸ್ವಾಮಿ ಒಬ್ಬ ಅಳುಬುರಕ ಮುಖ್ಯಮಂತ್ರಿ”

“ಕುಮಾರಸ್ವಾಮಿ ಒಬ್ಬ ಅಳುಬುರಕ ಮುಖ್ಯಮಂತ್ರಿ”

ಹುಬ್ಬಳ್ಳಿ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಸಿಎಂ ಕುಮಾರಸ್ವಾಮಿ ಒಬ್ಬ ಅಳಬುರಕ ಮುಖ್ಯಮಂತ್ರಿ. ನೀವು ಯಾವತ್ತಾದ್ರು ಅಳುವ ಸಿಎಂ ನೋಡಿದ್ದೀರಾ?. ನಮಗೆ ಅಳುವ ಮುಖ್ಯಮಂತ್ರಿ ಬೇಕಿಲ್ಲಾ, ಜನರ ಕಣ್ಣಿರು ಒರೆಸುವ ಮುಖ್ಯಮಂತ್ರಿ ಬೇಕು ಎಂದು ಬಸವರಾಜ ಬೊಮ್ಮಯಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷ 125ರಿಂದ 78ಕ್ಕೆ ಕುಸಿದಿದೆ. ಹೀಗಿದ್ರೂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಯಿ ವ್ಯಂಗ್ಯವಾಡಿದ್ದಾರೆ. ಕುಂದಗೋಳ ವಿಧಾನ ಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕುಂದಗೋಳ ಜನತೆ ಇತಿಹಾಸ ಬರೆಯಬೇಕಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಕೆಶಿ ಪ್ರಬುದ್ಧ ನಾಯಕ ಅಂತಾ ತಿಳಿದಿದ್ದಾರೆ. ಕುಂದಗೋಳದ ಹೊಡೆತಾ ಇನ್ನೂ ಗೊತಿಲ್ಲ ಅವರಿಗೆ. ಚಿಕ್ಕನಗೌಡರ್ ಗೆಲ್ಲಿಸುವ ಮೂಲಕ ಬಿಎಸ್​ವೈ ಕೈಬಲಪಡಿಸಬೇಕು. ಈ ಎರಡೂ ಕ್ಷೇತ್ರದಲ್ಲಿ ಜನ ಬಿಜೆಪಿ ಗೆಲ್ಲಿಸುವ ಮೂಲಕ ಬಿಎಸ್​ವೈ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂದರು. ಕಾಂಗ್ರೆಸ್​ನವರು ಹಣ ಮತ್ತು ಜಾತಿ ಮೇಲೆ ಚುನಾವಣೆ ಮಾಡುತ್ತಾರೆ ಎಂದು ಆರೋಪಿಸಿದರು. ಈಗಾಗಲೇ ಕುಂದಗೋಳಕ್ಕೆ ಹಣದ ಬಾಕ್ಸ್ ಬಂದಿವೆ. ಎಲ್ಲಾ ಹೊಲದಲ್ಲಿ ಈಗಾಗಲೇ ಸರಾಯಿ ಬಾಕ್ಸ್ ಇವೆ. ಇದು ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ನಡೆಯುವ ಚುನಾವಣೆ, ಕೋಮುವಾದಿ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸಬೇಕಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos