ಕುಮಾರಸ್ವಾಮಿಗೆ ದರ್ಶನ್ ಸವಾಲ್.!

ಕುಮಾರಸ್ವಾಮಿಗೆ ದರ್ಶನ್ ಸವಾಲ್.!

ಬೆಂಗಳೂರು, . 27, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆಯಲ್ಲಿ ಸ್ಟಾರ್’ಗಳಾದ ಯಶ್ ಮತ್ತು ದರ್ಶನ್ ಅವರು ಕುಮಾರ ಸ್ವಾಮಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ. ಅಂದಹಾಗೇ ಸ್ಟಾರ್’ಗಳನ್ನು ಹಿಗ್ಗಾ-ಮುಗ್ಗಾ ಟೀಕೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸವಾಲೊಂದನ್ನು ಹಾಕಿದ್ದಾರೆ. ಇಂದು ನಗರದ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ನಾವೆಲ್ಲಾ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು.

ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.

ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಅಂದಹಾಗೇ ದರ್ಶನ್ ಅಭಿನಯದ ಯಜುಮಾನ  ಚಿತ್ರದ ಕಟೌಟ್’ನ್ನು ಕಾಲೇಜಿನ ಆವರಣದಲ್ಲಿ  ನಿಲ್ಲಿಸಲಾಗಿತ್ತು. ದರ್ಶನ್ ಅವರು ಬರುತ್ತಿದ್ದಂತೇ ವಿದ್ಯಾರ್ಥಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಕೂಗುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos