‘ಜಮೀರ್ ಒಬ್ಬ ಕಳ್ಳ’, ಕಳ್ಳನನ್ನು ವಾಚ್‍ಮೆನ್‍ ಮಾಡೋಕೆ ಆಗುತ್ತಾ : ಈಶ್ವರಪ್ಪ

‘ಜಮೀರ್ ಒಬ್ಬ ಕಳ್ಳ’, ಕಳ್ಳನನ್ನು ವಾಚ್‍ಮೆನ್‍ ಮಾಡೋಕೆ ಆಗುತ್ತಾ : ಈಶ್ವರಪ್ಪ

ಹುಬ್ಬಳ್ಳಿ, ಮೇ. 15, ನ್ಯೂಸ್‍ ಎಕ್ಸ್ ಪ್ರೆಸ್‍: ಚಿಂಚೋಳಿ, ಕುಂದಗೋಳ ಬೈ ಎಲೆಕ್ಷನ್‍ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಜೆಪಿ ಹಾಗೂ ಕೈ ನಾಯಕರು ಪರಸ್ಪರ ಕಿತ್ತಾಟ ಜೋರಾಗಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿನ ಕೆ.ಎಸ್‍.ಈಶ್ವರಪ್ಪ, ಸಿದ್ದರಾಮಯ್ಯ ಕಡೆಯರು ಸಿಎಂ ಆಗ್ಲೀ ಎಂದು ಸೋಬಾನೆ ಹಾಡ್ತಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಆಗೋ ಹುಚ್ಚು ಹಿಡಿದಿದೆ ಎಂದು ವ್ಯಂಗ್ಯವಾಡಿದ್ದಾರೆ.  ಇನ್ನು ಬಿಜೆಪಿ ವಾಚ್‍ಮೆನ್‍ ಆಗ್ತೀನಿ ಎಂಬ ಸಚಿವ ಜಮೀರ್‍ ಅಹಮ್ಮದ್‍ ಹೇಳಿಕೆಗೆ ಈಶ್ವರಪ್ಪ, ಜಮೀರ್‍  ಒಬ್ಬ ಕಳ್ಳ. ಕಳ್ಳನನ್ನು ವಾಚ್‍ಮೆನ್‍ ಮಾಡಿಕೊಳ್ಳೋಕೆ ಆಗೋದಿಲ್ಲ  ಅಂತ ಲೇವಡಿ ಮಾಡಿದ್ದಾರೆ.

‘ಈಶ್ವರಪ್ಪಗೆ ತಲೆ ಸರಿಯಿಲ್ಲ’

ಈಶ್ವರಪ್ಪ ಹೇಳಿಕೆಗೆ ಡಿ.ಕೆ ಸುರೇಶ್‍ ಈಶ್ವರಪ್ಪಗೆ ತಲೆಸರಿಯಿಲ್ಲ. ಅವರನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ.  ಒಟ್ಟಾರೆ ಬೈ ಎಲೆಕ್ಷನ್‍ ಕೀಳುಮಟ್ಟದ ಹೇಳಿಕೆಯಿಂದ ಫೇಮಸ್‍ ಆಗ್ತಾ ಇರೋದು ನಿಜಕ್ಕೂ ದುರಂತ.

 

 

ಫ್ರೆಶ್ ನ್ಯೂಸ್

Latest Posts

Featured Videos