ನಟ ಸೈಫ್ ಅಲಿಖಾನ್, ನಟಿ ನೀಲಂ, ಟಬುಗೆ ಮತ್ತೆ ಸಂಕಷ್ಟ..!

ನಟ ಸೈಫ್ ಅಲಿಖಾನ್, ನಟಿ ನೀಲಂ, ಟಬುಗೆ ಮತ್ತೆ ಸಂಕಷ್ಟ..!

ರಾಜಸ್ತಾನ್​, ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಬಾಲಿವುಡ್​ ನಟ ಸಲ್ಮಾನ್​ ಖಾನ್​ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೈಫ್ ಅಲಿಖಾನ್, ನಟಿ ಸೋನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ಥಾನ ಹೈಕೋರ್ಟಿನ ಜೋಧ್ಪುರ್​ ಪೀಠ ಹೊಸದಾಗಿ ನೋಟಿಸ್ ಜಾರಿ ಮಾಡಿದೆ. ಇವರನ್ನು ದೋಷಮುಕ್ತಗೊಳಿಸಿ ಕಳೆದ ವರ್ಷ ಏಪ್ರಿಲ್ 5 ರಂದು ಸಿಜೆಎಂಸಿ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟಿನ ಏಕ ಸದಸ್ಯ ಪೀಠ ಈ ನೋಟಿಸ್  ನೀಡಿದೆ.

ದುಷ್ಯಂತ್ ಸಿಂಗ್ ಗೂ ನೋಟಿಸ್

ಕೃಷ್ಣಮೃಗ ಬೇಟಿ ಪ್ರದೇಶದಲ್ಲಿ ಸೈಫ್ ಅಲಿಖಾನ್ ಜೊತೆಯಲ್ಲಿದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ. ಎಂಟು ವಾರಗಳ ನಂತರ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶ ಗಾರ್ಗ್ ಅವರು ನಿರ್ದೇಶಿಸಿದ್ದಾರೆ.ಆರೋಪಗಳಿಂದ ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿರುವ ಮೇಲ್ಮನವಿ ಕುರಿತು ಪ್ರತಿವಾದಿಗಳಿಗೆ  ಮಾರ್ಚ್ 11ರಂದು  ಹೈಕೋರ್ಟ್ ನೋಟಿಸ್ ನೀಡಿತ್ತು. 1998, ಅಕ್ಟೋಬರ್ 2ರಂದು ಜೋಧ್ಪುರ​ನಲ್ಲಿ ‘ಹಮ್ ಸಾಥ್ ಸಾಥ್ ಹೈಂ’ ಸಿನಿಮಾದ ಚಿತ್ರೀಕರಣದ ವೇಳೆ ಕೃಷ್ಣಮೃಗ ಬೇಟೆ ಆಡಿದ ಆರೋಪ ಕೇಳಿ ಬಂದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos