ಕೊಪ್ಪಳ, ಮೇ. 14, ನ್ಯೂಸ್ ಎಕ್ಸ್ ಪ್ರೆಸ್: ಕೊಪ್ಪಳದಲ್ಲಿ ಮನೆಯಲ್ಲಿ ಸುಖವಾಗಿ ನಿದ್ರಿಸುತ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿನ್ನೆ ರಾತ್ರಿ ಕುಷ್ಠಗಿ ತಾಲ್ಲೂಕು ಗುಮಗೇರಾ ಬಳಿ ರಸ್ತೆ ಬದಿಯ ಕಳೆದ ರಾತ್ರಿ ಮನೆಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮನೆ ಮುಂದೆ ಮಲಗಿದ್ದ ಬಸಮ್ಮ ಗಿರಣಿ ಸಾವನ್ನಪ್ಪಿದ್ದಾರೆ. ಇನ್ನು ಮೃತಳ ಗಂಡ ಲಕ್ಷ್ಮಣ ,ಮಗಳು ಮಂಜುಳಾ ಮತ್ತು ನಾಗರಾಜಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೇಸು ದಾಖಲಿಸಿಕೊಂಡ ಪೊಲೀಸ್ರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.