ಬೆಂಗಳೂರು, ಆ. 15: ಇಂದು ದೇಶಾದ್ಯಂತ 73ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. 72 ವರ್ಷ ಮುಗಿಸಿ 73 ವರ್ಷಕ್ಕೆ ಕಾಲಿಡುತ್ತಿದ್ದೇವೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯಸಿಗಬೇಕು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆಯಿಲ್ಲ ಅಂತವರು ಅಧಿಕಾರಕ್ಕೆ ಬಂದಾಗ ಇಂತ ಪರಿಸ್ಥಿತಿ ಬರಲಿದೆ.
ನಾವೆಲ್ಲರೂ ಪ್ರತಿಜ್ಙೆಯನ್ನ ಮಾಡಬೇಕು ಪ್ರಜಾಪ್ರಭುತ್ವವನ್ನ ನಾವು ಉಳಿಸುವ ಕೆಲಸ ಮಾಡಬೇಕು.
ದೇಶದ ಐಕ್ಯತೆ, ಸಾಮಾಜಿಕತೆ ಉಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿಯಾದ
ಸಿದ್ದರಾಮಯ್ಯ ನವರು ಹೇಳಿದ್ದಾರೆ.