ಬೆಂಗಳೂರು, ಅ. 31: ಕರ್ನಾಟಕ ಸಾಬೂನು ಮತ್ತು ಸಾಮಾರ್ಜಕ ನಿಯಮಿತದ ಷೇರುದಾರರ ಮತ್ತು ಮಂಡಳಿಯ ನಿರ್ದೇಶಕರ ವತಿಯಿಂದ 15.91 ಕೋಟಿ ರೂ.ಗಳ ಡಿವಿಡೆಂಟ್ ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.