15.91 ಕೋಟಿ ಸಿಎಂ ಗೆ ಹಸ್ತಾಂತರ

15.91 ಕೋಟಿ ಸಿಎಂ ಗೆ ಹಸ್ತಾಂತರ

ಬೆಂಗಳೂರು, ಅ. 31: ಕರ್ನಾಟಕ ಸಾಬೂನು ಮತ್ತು ಸಾಮಾರ್ಜಕ ನಿಯಮಿತದ ಷೇರುದಾರರ ಮತ್ತು ಮಂಡಳಿಯ ನಿರ್ದೇಶಕರ ವತಿಯಿಂದ  15.91 ಕೋಟಿ ರೂ.ಗಳ ಡಿವಿಡೆಂಟ್ ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos