ಕೊಪ್ಪಳ, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: ಹಾಲೀ ಸಂಸದರಿದರು, ಸಾಕಷ್ಟು ಹರಸಾಹಸ ಪಟ್ಟು ಟಿಕೇಟ್ ಗಿಟ್ಟಿಸಿಕೊಂಡಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಕೊನೆಗೂ ಟಿಕೇಟ್ ತಮ್ಮದಾಗಿಸಿಕೊಂಡು ಇಂದಿನಿಂದ ಅಖಾಡಕ್ಕೆ ಇಳಿದಿದ್ದಾರೆ.
ಬಿಜೆಪಿ ಹೈ ಕಮಾಂಡ್ ಮೊದಲ ಪಟ್ಟಿಯಲ್ಲೆ ಎಲ್ಲಾ ಹಾಲಿ ಸಂಸದರಿಗೆ ಟಿಕೇಟ್ ಅನೌನ್ಸ ಮಾಡಿದ ಕೂಡ ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲೀ ಸಂಸದರಿಗೆ ಮಾತ್ರ ಟಿಕೇಟ್ ಅನೌನ್ಸ ಮಾಡದೇ ನಿಗೂಡವಾಗಿ ಇಟ್ಟುಕೊಂಡಿದರು.
ಇದರಿಂದ ನಿರಾಸೆ ಗೊಂಡ ಕರಡಿ ಸಂಗಣ್ಣ ಬೆಂಗಳೂರಿಗೆ ತೆರಳಿ ಸಾಕಷ್ಟು ಹರಸಾಹ ಪಡಬೇಕಾಯಿತು, ಕೊನೆಗೂ ಬಿಜೆಪಿ ಹೈ ಕಮಾಂಡ್ ಕರಡಿರವರ ಕೈಹಿಡಿದು ಅಖಾಡಕ್ಕೆ ಇಳಿಸಿದೆ.
ಇಂದಿನಿಂದ ಕರಡಿ ಸಂಗಣ್ಣ ಎಲ್ಲಾ ಜಿಲ್ಲಾ ಬಿಜೆಪಿ ಮುಖಂಡರೊಂದಿಗೆ ಚರ್ಚೆ ಸಮಾಲೋಚನೆ ನಡೆಸುತ್ತಿದ್ದು, ಎ. 4 ರಂದು ನಾಮಿನೇಷನ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ನಾಮಿನೇಷನ್ ವೇಳೆ ಮಾಜೀ ಸಿಎಂ ಜಗದೀಶ್ ಶಟ್ಟರ್, ಗೋವಿಂದ್ ಕರಜೋಳ, ಲಕ್ಷ್ಮಣ ಸವದಿ, ಶ್ರೀರಾಮುಲು ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ಇನ್ನೂ ಟಿಕೇಟ್ ವಿಳಂಬದ ಬಗ್ಗೆ ಕೇಳಿದರೆ, ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜೀ ಸಿಎಂ ಸಿದ್ರಾಮಯ್ಯನವರು ಕಂಟೆಸ್ಟ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು ಅದಕ್ಕಾ ವರಿಷ್ಠರು ನನ್ನ ಹೆಸರನ್ನು ಅಂತಿಮಗೊಳಿಸಲು ತಡೆಹಿಡಿದಿದ್ದು ಎಂದು ಹೇಳುತ್ತಾರೆ.