“ರೇವಣ್ಣ ಕೊಳೆತ ನಿಂಬೆಹಣ್ಣು…” ಕೆ. ಎಸ್. ಈಶ್ವರಪ್ಪ

“ರೇವಣ್ಣ ಕೊಳೆತ ನಿಂಬೆಹಣ್ಣು…” ಕೆ. ಎಸ್. ಈಶ್ವರಪ್ಪ

ಶಿವಮೊಗ್ಗ, ಏ. 22, ನ್ಯೂಸ್ ಎಕ್ಸ್ ಪ್ರೆಸ್ : ಸಚಿವ ಎಚ್‌.ಡಿ. ರೇವಣ್ಣ ಕೊಳೆತ ನಿಂಬೆ​ ಹ​ಣ್ಣಿನಂತೆ ಎಂದು ಹೋಲಿಸಿ ಮಾಜಿ ಉಪಮುಖ್ಯಮಂತ್ರಿ, ಶಾಸಕ  ಕೆ.ಎಸ್.ಈಶ್ವರಪ್ಪ ವ್ಯಂಗ್ಯ​ವಾ​ಡಿ​ದ್ದಾರೆ. ಶಿವ​ಮೊಗ್ಗ ಕ್ಷೇತ್ರದಲ್ಲಿ ಬಿ.ವೈ.​ರಾ​ಘ​ವೇಂದ್ರರನ್ನು ಈಶ್ವ​ರಪ್ಪ ಸೋಲಿ​ಸು​ತ್ತಾ​ರೆಂಬ ಸಚಿವ ಎಚ್‌.​ಡಿ.​ರೇ​ವಣ್ಣ ಹೇಳಿಕೆಗೆ ಪ್ರತಿ​ಕ್ರಿಯೆ ನೀಡಿದ ಅವರು,ಬಿಜೆಪಿ  ಪಕ್ಷ​ವನ್ನು ತಾಯಿ ಎಂದು ನಂಬಿದವರು ನಾವು ತಾಯಿಗೆ ದ್ರೋಹ  ಮಾಡಲ್ಲ.ಶಿವ​ಮೊ​ಗ್ಗ​ದಲ್ಲಿ ರಾಘ​ವೇಂದ್ರ ಗೆದ್ದ ನಂತರ ಇದೇ ನಿಂಬೆ​ಹ​ಣ್ಣಿನ ರೇವಣ್ಣ ಬಳಿ ಕರೆ​ದೊಯ್ದು ನಿಲ್ಲಿ​ಸು​ತ್ತೇವೆ. ಆಗ ರೇವಣ್ಣ ಮಾತ​ನಾ​ಡಲಿ ಸವಾಲ್ ಹಾಕಿದರು. ಮೈತ್ರಿ ಧರ್ಮದ ಅರ್ಥವೇ ಗೊತ್ತಿ​ಲ್ಲದ ರೇವಣ್ಣನಿಗೆ ಪಕ್ಷದ ಬಗ್ಗೆ ಏನು ಗೊತ್ತು?  ಮೈತ್ರಿ ಅಂತಾ ಹೆಸ​ರಿಗೆ ಅವ​ಮಾನಿಸುವಂತೆ ಕಾಂಗ್ರೆ​ಸ್‌-ಜೆಡಿ​ಎಸ್‌ ನಾಯ​ಕರ ವರ್ತನೆ ಇದೆ. ಆದರೆ, ಬಿಜೆಪಿಯನ್ನು ಗೆಲ್ಲಿ​ಸಲು ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸು​ತ್ತಾ​ರೆ​ಯೇ ಹೊರತು ವ್ಯಕ್ತಿ​ಯನ್ನು ಗೆಲ್ಲಿ​ಸು​ವು​ದ​ಕ್ಕಲ್ಲ.  ಈ ಹಿಂದೆ ಡಿ.ಕೆ. ಶಿವಕುಮಾರ್‌ ಅವರು ರೇವಣ್ಣ ಅವರನ್ನು ಸೋಲಿಸಿದರು. ಅದರ ಅನುಭವ ಅವರಿಗಿದೆ. ಈ ಅನುಭವವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos