ಶಿವಮೊಗ್ಗ, ಏ. 22, ನ್ಯೂಸ್ ಎಕ್ಸ್ ಪ್ರೆಸ್ : ಸಚಿವ ಎಚ್.ಡಿ. ರೇವಣ್ಣ ಕೊಳೆತ ನಿಂಬೆ ಹಣ್ಣಿನಂತೆ ಎಂದು ಹೋಲಿಸಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರರನ್ನು ಈಶ್ವರಪ್ಪ ಸೋಲಿಸುತ್ತಾರೆಂಬ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಬಿಜೆಪಿ ಪಕ್ಷವನ್ನು ತಾಯಿ ಎಂದು ನಂಬಿದವರು ನಾವು ತಾಯಿಗೆ ದ್ರೋಹ ಮಾಡಲ್ಲ.ಶಿವಮೊಗ್ಗದಲ್ಲಿ ರಾಘವೇಂದ್ರ ಗೆದ್ದ ನಂತರ ಇದೇ ನಿಂಬೆಹಣ್ಣಿನ ರೇವಣ್ಣ ಬಳಿ ಕರೆದೊಯ್ದು ನಿಲ್ಲಿಸುತ್ತೇವೆ. ಆಗ ರೇವಣ್ಣ ಮಾತನಾಡಲಿ ಸವಾಲ್ ಹಾಕಿದರು. ಮೈತ್ರಿ ಧರ್ಮದ ಅರ್ಥವೇ ಗೊತ್ತಿಲ್ಲದ ರೇವಣ್ಣನಿಗೆ ಪಕ್ಷದ ಬಗ್ಗೆ ಏನು ಗೊತ್ತು? ಮೈತ್ರಿ ಅಂತಾ ಹೆಸರಿಗೆ ಅವಮಾನಿಸುವಂತೆ ಕಾಂಗ್ರೆಸ್-ಜೆಡಿಎಸ್ ನಾಯಕರ ವರ್ತನೆ ಇದೆ. ಆದರೆ, ಬಿಜೆಪಿಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಾರೆಯೇ ಹೊರತು ವ್ಯಕ್ತಿಯನ್ನು ಗೆಲ್ಲಿಸುವುದಕ್ಕಲ್ಲ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ರೇವಣ್ಣ ಅವರನ್ನು ಸೋಲಿಸಿದರು. ಅದರ ಅನುಭವ ಅವರಿಗಿದೆ. ಈ ಅನುಭವವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.