ಬೆಂಗಳೂರು, ಜು. 18: ತನ್ನ ಸ್ನೇಹಿತನ ಮಾತು ಕೇಳಿ, ತನ್ನ ಹೆತ್ತ ಮಗಳನ್ನ ಕೊಲೆ ಮಾಡಿರುವ ತಂದೆ. ಹೌದು, 5 ವರ್ಷದ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿಗಳ ಬಂಧಿಸಿದ್ದಾರೆ. ಮಾಗಡಿ ಠಾಣೆಯ ರೌಡಿಶೀಟರ್ ಮಹೇಶ್, ಜಯಪ್ಪ ಬಂಧಿತ ಆರೋಪಿಗಳು. ಜಯಪ್ಪನಿಗೆ ನಾಲ್ಕು ಜನ ಮಕ್ಕಳಿದ್ದರು, ಅದರಲ್ಲಿ ಒಂದು ಮಗು ಅಂಗವಿಕಲವಾಗಿತ್ತು.
ಸಾಕಾಷ್ಟು ಕಡೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ವೃತ್ತಿಯಲ್ಲಿ ಗಾರೆ ಕೆಲಸ ಮಾಡ್ತಿದ್ದ ಜಯಪ್ಪನಿಗೆ ಮಹೇಶ್ ಪರಿಚಯ ಆಗಿತ್ತು. ಮಗುವಿಗೆ ಖರ್ಚು ಮಾಡಲು ನನ್ನ ಬಳಿ ದುಡ್ಡು ಇಲ್ಲ ಎಂದಿದ್ದ ಜಯಪ್ಪ. ನಂತರ ಜಯಪ್ಪ ಮಹೇಶನಿಗೆ ಮಗುವನ್ನ ಸಾಯಿಸುವಂತೆ ತಿಳಿಸಿದ್ದನು. ಅದ್ರಂತೆ ಕತ್ತು ಹಿಸುಕಿ ಮಗುವನ್ನ ಸಾಯಿಸಿದ್ದ ಆರೋಪಿಗಳ ಬಂಧನ ಮಾಡಿದ್ದಾರೆ. ಸುಮಾರು 50 ಸಾವಿರ ಹಣವನ್ನ ಮಹೇಶ್ ಜಯಪ್ಪನಿಂದ ಪಡೆದುಕೊಂಡಿದ್ದನು. ನಂತರ ಇಬ್ಬರು ಸೇರಿ ಮಗುವಿನ ಅಂತ್ಯಸಂಸ್ಥಾರವನ್ನ ನಡೆಸಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.