ಕೋಲಾರಕ್ಕೆ ಸಚಿವ ಸ್ಥಾನ ಸಿಕ್ಕದೇ ಇರೋದು ದುರದೃಷ್ಟಕರ: ಕೆ.ಎಚ್.ಮುನಿಯಪ್ಪ

ಕೋಲಾರಕ್ಕೆ ಸಚಿವ ಸ್ಥಾನ ಸಿಕ್ಕದೇ ಇರೋದು ದುರದೃಷ್ಟಕರ: ಕೆ.ಎಚ್.ಮುನಿಯಪ್ಪ

ಬೆಂಗಳೂರು: ಕೋಲಾರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಗೆದ್ದಿದ್ದೇವೆ.  ಆದ್ರೂ ಸಚಿವ ಸ್ಥಾನ ಸಿಕ್ಕದೇ ಇರೋದು ದುರದೃಷ್ಟಕರ ಸಂಗತಿ ಎಂದು ಸಂಸದ ಕೆ.ಎಚ್.ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ದೆಹಲಿಯಿಂದ ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದು  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗಳು ರೂಪ ಈ ಭಾರಿ ಶಾಸಕಿಯಾಗಿದ್ದಾಳೆ. ಸಚಿವ ಸ್ಥಾನ ಪಡೆಯಲು ಇನ್ನೂ ಟೈಂ ಇದೆ. ಆದ್ರೆ ಜಿಲ್ಲೆಯ ಅನುಗುಣವಾಗಿ ಒಬ್ಬರಿಗೆ ಕೋಲಾರದಲ್ಲಿ ಸಚಿವ ಸ್ಥಾನ ನೀಡಬಹುದಿತ್ತು ಎಂದರು.

ಕೆಪಿಸಿಸ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಮಾಡೋಣ ಎಂದಿದ್ದಾರೆ. ವರಿಷ್ಠರು ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷವನ್ನು ಮೊದಲು ಉತ್ತಮಗೊಳಿಸಿ ಎಂದಿದ್ದಾರೆ. ಹೀಗಾಗಿ ಯಾರು ಕೂಡ ಅಸಮಾಧಾನ ಮಾಡಿಕೊಳ್ಳಬೇಡಿ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಎಂದು ಅತೃಪ್ತ ಶಾಸಕರಿಗೆ  ಕೆ.ಎಚ್ ಮುನಿಯಪ್ಪ ಸಲಹೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos