ಅಂಪೈರ್‌ಗಳ ತೀರ್ಪಿನ ವಿರುದ್ಧ ಕೊಹ್ಲಿ ಕಿಡಿ

ಅಂಪೈರ್‌ಗಳ ತೀರ್ಪಿನ ವಿರುದ್ಧ ಕೊಹ್ಲಿ ಕಿಡಿ

ಬೆಂಗಳೂರು, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ನಾವು ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ ಎಂದು ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಅಂಪೈರ್‍ಗಳ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ನಂತರ ಕೊಹ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐಪಿಎಲ್‍ನಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಅಂಪೈರ್‍ಗಳು ಉತ್ತಮ ತೀರ್ಪುಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ನಾವು ಐಪಿಎಲ್ ಲೆವೆನ್ ಕ್ರಿಕೆಟ್ ಆಡುತ್ತಿದ್ದೇವೆ. ಯಾವುದೇ ಕ್ಲಬ್ ಮ್ಯಾಚ್ ಅಲ್ಲ. ಹೀಗಾಗಿ ಅಂಪೈರ್‌ಗಳು ಹೆಚ್ಚಿನ ಗಮನವಹಿಸಬೇಕು. ಆದರೆ ಅಂಪೈರ್ ನಿರ್ಧಾರ ಮಾತ್ರ ಹಾಸ್ಯಸ್ಪದವಾಗಿತ್ತು ಎಂದಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದ ಅಂತಿಮ ಓವರ್‍ನಲ್ಲಿ ವೇಗಿ ಲಸಿತ್ ಮಾಲಿಂಗ ನೋ ಬಾಲ್ ಮಾಡಿದ್ದರು ಅದನ್ನು ಸರಿಯಾಗಿ ಅಂದಾಜಿಸದ ಅಂಪೈರ್‍ಗಳು ಕೊಟ್ಟ ಕೆಟ್ಟ ತೀರ್ಪಿನಿಂದಾಗಿಯೇ ನಾವು ಪಂದ್ಯವನ್ನು ಕೈಚೆಲ್ಲಬೇಕಾಯಿತು ಎಂದು ವಿರಾಟ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos