ನವದೆಹಲಿ, ಸೆ. 28 : ಟಿ20 ಕ್ರಿಕೆಟಿಗೆ ರೋಹಿತ್ ಶರ್ಮ ಅವರನ್ನು ನಾಯಕನಾಗಿ ನೇಮಿಸಿ ವಿರಾಟ್ ಕೊಹ್ಲಿ ಮೇಲಿನ ಹೊರೆ ಕಡಿಮೆಗೊಳಿಸಬೇಕಿದೆ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮೂರೂ ಮಾದರಿ ಕ್ರಿಕೆಟಿಗೆ ಒಬ್ಬರೇ ನಾಯಕರಾದರೆ ಅವರ ಮೇಲಿನ ಒತ್ತಡ ಹೆಚ್ಚುತ್ತದೆ. ಇದರಿಂದ ನಿರ್ದಿಷ್ಟ ಮಾದರಿಯ ಕಡೆಗೆ ಗಮನಹರಿಸಲು ಸಾಧ್ಯವಾಗದು. ಕೊಹ್ಲಿಗೂ ಇದೇ ರೀತಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದನ್ನು ಅರಿತು ಅವರ ಮೇಲಿನ ನಾಯಕತ್ವದ ಹೊರೆಯನ್ನು ಕಡಿಮೆಗೊಳಿಸಬೇಕಿದೆ ಎಂದು ಯುವಿ ಸಲಹೆಯಿತ್ತಿದ್ದಾರೆ.
ಕೊಹ್ಲಿ ಮೂರೂ ಮಾದರಿಯ ಕ್ರಿಕೆಟಿಗೆ ನಾಯಕರಾಗಿದ್ದಾರೆ. ಟಿ20ಗೆ ರೋಹಿತ್ ಶರ್ಮ ಅವರನ್ನು ನಾಯಕನನ್ನಾಗಿಸಿದರೆ ಕೊಹ್ಲಿ ಮೇಲಿನ ಹೊರೆ ಕಡಿಮೆಗೊಳ್ಳುತ್ತದೆ ಎಂಬುದು ಯುವಿ ಸಲಹೆ.