ಬೆಂಗಳೂರು, ಮಾ.25, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಆಗಿದ್ದು, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಕೋದಂಡರಾಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಬಿಜೆಪಿ ವರಿಷ್ಠರಿಗೆ ಕೋದಂಡರಾಮ ಪತ್ರ ಬರೆದಿದ್ದು, ಬೆಂಗಳೂರು ಮಹಾನಗರದ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷನಾಗಿರುವ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷವು ಎಸ್ ಸಿ ಮೋರ್ಚಾವನ್ನು ಕಾಟಾಚಾರಕ್ಕೆ ಮಾಡಿರುವಂತಿದೆ ಎಂದು ಆರೋಪಿಸಿದ್ದಾರೆ.
ನನ್ನೊಂದಿಗೆ ಸಂಘಟನೆ ಮಾಡುವ ಪದಾಧಿಕಾರಿಗಳಿಗೆ ಗೌರವವಿಲ್ಲದಿದ್ದರೆ ಅಂತಹ ಸ್ಥಾನಕ್ಕೆ ನಾನು ದ್ರೋಹ ಮಾಡಿದಂತಾಗುತ್ತದೆ.ಹಾಗಾಗಿ, ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.