ಆಸ್ತಿ ವಿಚಾರಕ್ಕಾಗಿ ಅಣ್ಣನಿಂದೇ ತಮ್ಮನ ಕೊಲೆ

ಆಸ್ತಿ ವಿಚಾರಕ್ಕಾಗಿ ಅಣ್ಣನಿಂದೇ ತಮ್ಮನ ಕೊಲೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕುಟುಂಬಕ್ಕೆ ಯಾರು ಬೆಲೆ ಕೊಡುವುದಿಲ್ಲ ಇಲ್ಲಿ ಎಲ್ಲರಿಗೂ ಮುಖ್ಯವಾಗಿರುವುದು ಹಣ ಆಸ್ತಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಸಂಬಂಧಗಳಕ್ಕಿಂತ ಮುಖ್ಯವಾಗಿರುವುದು ಎಲ್ಲರಿಗೂ ಹಣ ಹಣಕ್ಕಾಗಿ ಏನು ಬೇಕಾದರು ಮಾಡುವುದಕ್ಕೆ ಜನರು ಮುಂದಾಗುತ್ತಾರೆ.

ಜಮೀನು ಹಾಗೂ ಕಾರು ವಿಚಾರವಾಗಿ ಸಹೋದರರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. ಅಣ್ಣನೊಬ್ಬ ತಮ್ಮನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ತಮ್ಮ ಕಾರು ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಅಣ್ಣ ವೆಂಕಟೇಶ್ ತಮ್ಮ ಜಗದೀಶ್ ಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.

ಅಣ್ಣ ತಮ್ಮನ ನಡುವೆ ಜಮೀನು ಹಾಗು ಕಾರಿನ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಒಟ್ಟು ಕುಟುಂಬದಲ್ಲಿ ತಮ್ಮನ ಹೆಸರಲ್ಲಿ ಕಾರು ಖರೀದಿಯಾಗಿತ್ತು. ಕಾರು ಕೊಡುವಂತೆ ಅಣ್ಣ ವೆಂಕಟೇಶ್ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ತಮ್ಮ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಅಣ್ಣ ವೆಂಕಟೇಶ್ ತಮ್ಮ ಜಗದೀಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದೆ ಜಗದೀಶ್ ಅನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಆದರೆ ಚಿಕಿತ್ಸೆ ಪಾಲಕಾರಿಯಾಗದೆ ಜಗದೀಶ್ ಸಾವನಪ್ಪಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos