ಬೆಂಗಳೂರು, ನ. 25 : ಗೆಳೆತನವೆಂದರೆ ಹಾಗೆ. ಪ್ರೀತಿಗಿಂತ ಹೆಚ್ಚು ಶಾಶ್ವತ ಸ್ನೇಹ. ಕೊನೆಯವರೆಗೂ ಜೊತೆಯಲ್ಲಿರುವ ಸಂಬಂಧ. ಆದರೆ, ಹುಡುಗಿ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಜಗಳವಾಗಿ, ಯುವಕನೋರ್ವ ಆತನ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಪ್ರದೀಪ್(26) ಕೊಲೆಯಾದ ಯುವಕ. ಆತನ ಸ್ನೇಹಿತ ವಿಜಯ್ ಆಲಿಯಾಸ್ ವಿನೋದ್ ಕೊಲೆ ಮಾಡಿದ ಆರೋಪಿ. ಭಾನುವಾರ ರಾತ್ರಿ ಶ್ರೀನಗರದಿಂದ ವಿಜಯ್ನನ್ನು ನೋಡಲು ಪ್ರದೀಪ್ ಬಂದಿದ್ದನು. ಹುಡುಗಿ ವಿಚಾರಕ್ಕೆ ಜಗಳ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪದಲ್ಲಿ ವಿಜಯ್ ಚಾಕುವಿನಿಂದ ಪ್ರದೀಪ್ಗೆ ಇರಿದು ಕೊಲೆ ಮಾಡಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.