ಕಿಲ್ಲರ್ ಬಿಎಂಟಿಸಿಗೆ ಯುವಕ ಬಲಿ

ಕಿಲ್ಲರ್ ಬಿಎಂಟಿಸಿಗೆ ಯುವಕ ಬಲಿ

ವೈಟ್ ಪೀಲ್ಡ್, ಜು. 18 : ನಗರದಲ್ಲಿ ಇಂದು ಮುಂದೆ ಚಲುಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಟ್ರಾಫಿಕ್ ಪೊಲಿಸ್ ಠಾಣಾ ವ್ಯಾಪ್ತಿಯ ಸಫಲ್ ಆಯಿಲ್ ಕಂಪನಿ ಬಳಿ ನಡೆದಿದೆ.

ವಿಜ್ಞಾಸಾಗರ್ ಮೃತ ಯುವಕ (24).    ಬಳ್ಳಾರಿ ಮೂಲದ ವಿಜ್ಞಾಸಾಗರ್ ಸ್ನೇಹಿತರೊಂದಿಗೆ  ಹೊಸಕೋಟೆಯಲ್ಲಿ ವಾಸವಾಗಿದ್ದನು. ವೈಟ್ ಫೀಲ್ಡ್ ನ ಮೆಕಾಲೆ ಸೇಲ್ಸ್ ಅಂಡ್ ಸರ್ವಿಸ್ ಕಂಪನಿಯಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ. ಇಂದು ಬೆಳಿಗ್ಗೆ ಸುಮಾರು 8:30 ರಲ್ಲಿ ಹೊಸಕೋಟೆಯಿಂದ ಕೆಲಸಕ್ಕೆ ಬರುವಾಗ  ಕಾಡುಗುಡಿಯಿಂದ ವೈಟ್ ಫೀಲ್ಡ್ ಕಡೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಕಾಡುಗುಡಿಯ ಸಫಲ್ ಆಯಿಲ್ ಕಂಪನಿ  ಬಳಿ ಮುಂದೆ ಚಲುಸುತ್ತಿದ್ದ ಬೈಕ್ ಗೆ ಡಿಕ್ಕಿ ಹೋಡೆದಿದೆ. ತಕ್ಷಣ ಕೆಳಗೆ ಬಿದ್ದ ಬೈಕ್ ಸವಾರನ ತಲೆಯ  ಮೇಲೆ ಬಸ್ ನ ಹಿಂಬದಿ ಚಕ್ರ ಚಲಿಸಿದ ಪರಿಣಾಮ  ಸ್ಥಳದಲ್ಲೆ ಬೈಕ್ ಸವಾರ ಮೃತಪಟ್ಟಿದ್ದಾನೆ.

ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ  ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos