ಮಕ್ಕಳು ಕೂಡ ಎಚ್ ಡಿಕೆ ಮಾತು ನಂಬಲ್ಲ

ಮಕ್ಕಳು ಕೂಡ ಎಚ್ ಡಿಕೆ ಮಾತು ನಂಬಲ್ಲ

ಬೆಂಗಳೂರು, ಜ. 12 : ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜ್ಯವನ್ನು ತಣ್ಣಗೆ ಇರಲು ಬಿಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶನಿವಾರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಇನ್ನು ಯಾವ ಹಿಂಸೆಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದಾರೆ. ಗೋಕಳ್ಳರು, ಗೋಹತ್ಯೆ ಮಾಡುವವರ ರಕ್ಷಣೆಗೆ ನಿಂತಿದ್ದಾರೆ ಎಂದು ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯಗೆ ಸಿಎಂ ಕುರ್ಚಿಯ ಮೇಲೆಯೇ ಕಣ್ಣು. ವರುಣಾದಲ್ಲಿ ಸೋತರು, ಬಾದಾಮಿಯಲ್ಲಿ ಆಕಸ್ಮಾತ್ ಗೆದ್ದರು. ಮೊದಲು ನಿಮ್ಮ ಪಕ್ಷವನ್ನು ಉಳಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಅಲ್ಲದೆ, ಗೋಲಿ ಆಡುವ ಮಕ್ಕಳು ಕೂಡ ಕುಮಾರಸ್ವಾಮಿ ಮಾತು ನಂಬಲ್ಲ, ಒಂದು ಕಡೆ ಅಪ್ಪ ಮಗ ಇಬ್ಬರೂ ಸೋತರು. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗಿದ್ದಾರೆ. ಅವರು ಪೊಲೀಸರನ್ನು ಕರೆದು ಮಾಹಿತಿ ಪಡೆಯಲಿ. ಆದರೆ, ಈ ರೀತಿಯ ಚೀಪ್ ಪಾಪುಲಾರಿಟಿ ಪಡೆಯುವುದನ್ನು ಖಂಡಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆ.ಎಸ್.ಈಶ್ವರಪ್ಪ ಗುಡುಗಿದರು.

ಫ್ರೆಶ್ ನ್ಯೂಸ್

Latest Posts

Featured Videos