ಹಾಡ ಹಗಲೇ ರಿಯಲ್‌ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್‌ಗೆ ಯತ್ನ?

ಹಾಡ ಹಗಲೇ ರಿಯಲ್‌ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್‌ಗೆ ಯತ್ನ?

ಬೆಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಕಾರು ಹಾಗೂ ಬೈಕ್​ನಲ್ಲಿ ಬಂದ ಏಳೆಂಟು ಜನ ಸಹಚರರು ಉದ್ಯಮಿ ಮಲ್ಲಿಕಾರ್ಜುನ್‌ ಕಿಡ್ನ್ಯಾಪ್​ಗೆ ಯತ್ನ ಮಾಡಿರುವುದು ಪತ್ತೆಯಾಗಿದೆ. ಸದ್ಯ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.‌ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬ ರಿಯಲ್‌ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕಿಡ್ನ್ಯಾಪ್ ಮಾಡಲು ಪ್ರಯತ್ನಿಸಿರು ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ಮಂಜುನಾಥ್ ಆತನ ಮಗ ಕಿರಣ್ ಕುಮಾರ್ ಎಂಬುವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿಕಾರ್ಜುನ್ ಎಂಬುವರು ಬೆಂಗಳೂರಿನ BTM ಲೇಔಟ್​ನ ಕೃಷ್ಣ ಭವನ್ ಹೋಟೆಲ್ ಬಳಿ ಏಪ್ರಿಲ್‌ 7ರಂದು ನಿಂತಿದ್ದ ವೇಳೆ ಈ ಗ್ಯಾಂಗ್ ಹಲ್ಲೆ ಮಾಡಿದೆ. ತಕ್ಷಣ ಮಲ್ಲಿಕಾರ್ಜುನ ಮೈಕೋಲೇಔಟ್ ಠಾಣೆಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಲ್ಲೇ ಇದ್ದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಆಗ ಪೊಲೀಸರ ಮೇಲೂ ಹಲ್ಲೆಗೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಣಕಾಸು ವಿಚಾರಕ್ಕಾಗಿ ಹಲ್ಲೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕೃತ್ಯ ಸಂಪೂರ್ಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಹಾಗೂ ಬೈಕ್​ನಲ್ಲಿ ಬಂದ ಏಳೆಂಟು ಜನ ಸಹಚರರು ಉದ್ಯಮಿ ಮಲ್ಲಿಕಾರ್ಜುನ್‌ ಕಿಡ್ನ್ಯಾಪ್​ಗೆ ಯತ್ನ ಮಾಡಿರುವುದು ಪತ್ತೆಯಾಗಿದೆ. ಸದ್ಯ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.‌

ಫ್ರೆಶ್ ನ್ಯೂಸ್

Latest Posts

Featured Videos