ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ನಲ್ಲಿ ಟಾಪ್ ನಟರಲ್ಲಿ ಒಬ್ಬರಾಗಿರುವ ನಟ ಕಿಚ್ಚ ಸುದೀಪ್ ರವರು ಅತಿ ಹೆಚ್ಚು ಸುದ್ದಿಯಾಗುವುದೆಂದರೆ ಅವರ ಸೈಲ್ ನಲ್ಲಿ ಹೆಚ್ಚು ಸುದ್ದಿಯಾಗುತ್ತಾರೆ. ಹಾಗೂ ಭಾರತಾದ್ಯಾಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.
ನಾಡ ದೊರೆ ರಾಜವೀರ ಮದಕರಿನಾಯಕಗೆ ಈಗ ಹೊಸ ಗೆಟಪ್ ಬಂದಿದೆ. ಇದುವರೆಗೂ ಕುದುರೆ ಮೇಲೆ ಕುಳಿತ, ಆನೆಯನ್ನು ಪಳಗಿಸುತ್ತಿರುವ ದೃಶ್ಯದಲ್ಲಿ ಮಾತ್ರ ಕಾಣಸಿಗುತ್ತಿದ್ದ ಮದಕರಿನಾಯಕ ಇನ್ನು ಮೇಲೆ ಕೈಯಲ್ಲಿ ಗುರಾಣಿ ಹಿಡಿದ ಭಾವದೊಂದಿಗೆ ರಾರಾಜಿಸಲಿದ್ದಾನೆ. ಚಿತ್ರದುರ್ಗದ ಕಲಾವಿದ ಟಿ.ಎಂ.ವೀರೇಶ್ ತೈಲವರ್ಣದಲ್ಲಿ ಮದಕರಿನಾಯಕ ಭಾವಚಿತ್ರ ರಚಿಸಿದ್ದು ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಚಿತ್ರನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಮದಕರಿನಾಯಕ ತಾರುಣ್ಯದಲ್ಲಿ ಇದ್ದ ಭಾವಚಿತ್ರ ಇದಾಗಿದ್ದು ಅನಾವರಣ ಮಾಡಿ ಚಿತ್ರ ವೀಕ್ಷಿಸಿದ ಕಿಚ್ಚ ಸುದೀಪ್ ಬೆರಗಾಗಿದ್ದಾರೆ.