‘ಕೆರೆ ಬೇಟೆ’ ಚಿತ್ರತಂಡಕ್ಕೆ ಕ್ಷಮೆ ಕೇಳಿದ ಕಿಚ್ಚ

‘ಕೆರೆ ಬೇಟೆ’ ಚಿತ್ರತಂಡಕ್ಕೆ ಕ್ಷಮೆ ಕೇಳಿದ ಕಿಚ್ಚ

ಬೆಂಗಳೂರು: ಕನ್ನಡದ ಬಹು ನಿರೀಕ್ಷಿತ ಸಿನಿಮಾ ಹೆಸರು, ಪೋಸ್ಟರ್, ಟೀಸರ್​ಗಳಿಂದಲೇ ಸಾಕಷ್ಟು ಗಮನವನ್ನು ಈ ಚಿತ್ರ ಸೆಳೆದಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಸಖತ್ ಟ್ರೆಂಡ್ ಆಗಿದೆ. ಬಹಳ ಭಿನ್ನವಾದ ಕತೆ, ನಿರೂಪಣೆಯನ್ನು ಈ ಸಿನಿಮಾ ಹೊಂದಿರುವುದನ್ನು ಕೆರೆ ಬೇಟೆ ಟ್ರೈಲರ್ ಸಾರಿ ಹೇಳುತ್ತಿದೆ. ಕೆರೆ ಬೇಟೆ ಸಿನಿಮಾದ ಟ್ರೈಲರ್​ಗೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆರೆಬೇಟೆ ಸಿನಿಮಾದ ಟ್ರೈಲರ್ ನೋಡಿದ್ದೇನೆ. ಇದು ತುಂಬಾನೆ ಚೆನ್ನಾಗಿದೆ. ಕಂಟೆಂಟ್ ಬೇಸ್ ಸಿನಿಮಾ ಅಂತಲೇ ಅನಿಸುತ್ತಿದೆ. ಚಿತ್ರದ ಕಥೆಯನ್ನ ತುಂಬಾನೆ ಚೆನ್ನಾಗಿಯೇ ಹೇಳಿದ್ದಾರೆ ಅನಿಸುತ್ತಿದೆ. ತುಂಬಾನೆ ಭರವಸೆ ಮೂಡಿಸೋ ಈ ಸಿನಿಮಾದಲ್ಲಿ ನಾಯಕ ನಟ ಗೌರಿಶಂಕರ್ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ. ಇದರ ಬೆನ್ನಲ್ಲೆ ನಟ ಕಿಚ್ಚ ಸುದೀಪ್, ‘ಕೆರೆ ಬೇಟೆ’ ಚಿತ್ರತಂಡದ ಬಳಿ ಕ್ಷಮೆ ಕೇಳಿದ್ದಾರೆ.

ವಿಡಿಯೋ ಮೂಲಕ ಮಾತನಾಡಿರುವ ನಟ ಕಿಚ್ಚ ಸುದೀಪ್, ‘ಕೆರೆ ಬೇಟೆ’ ಸಿನಿಮಾದ ಟ್ರೈಲರ್ ನೋಡಿದೆ ನಾನು. ಸಿನಿಮಾದ ಕತೆ, ಈ ಸಿನಿಮಾದ ಟ್ರೈಲರ್ ನೋಡುತ್ತಿದ್ದಂತೆ ಒಂದು ನಿರೀಕ್ಷೆ ಹುಟ್ಟುತ್ತದೆ ಆ ಅಂಶ ನನಗೆ ಬಹಳ ಹಿಡಿಸಿತು’ ಎಂದಿದ್ದಾರೆ.

‘ನನ್ನ ಪ್ರಕಾರ ಟ್ರೈಲರ್ ಒಂದು ಈ ಹಂತಕ್ಕೆ ನಿರೀಕ್ಷೆಯನ್ನು ಮೂಡಿಸುತ್ತಿದೆ, ಭರವಸೆ ನೀಡುತ್ತಿದೆ ಎಂದರೆ ಆ ಸಿನಿಮಾ ಚೆನ್ನಾಗಿಯೇ ಇರುತ್ತದೆ. ಈ ಟ್ರೈಲರ್ ಅನ್ನು ನಾನು ಲಾಂಚ್ ಮಾಡಬೇಕಿತ್ತು. ಆದರೆ ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ನನಗೆ ಬರಲಾಗಲಿಲ್ಲ. ಈ ಕುರಿತು ಇಡೀ ತಂಡಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಸಿನಿಮಾ ತುಂಬಾ ಚೆನ್ನಾಗಿ ಪ್ರದರ್ಶನ ಕಾಣಲಿ, ದಿನಕರ್, ಜಯಣ್ಣ ನಿಮಗೆಲ್ಲ ಈ ಸಿನಿಮಾ ಲಾಭ ತಂದುಕೊಡಲಿ. ಎಲ್ಲರಿಗೂ ಒಳ್ಳೆಯದಾಗಲಿ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿ’ಎಂದು ಸುದೀಪ್ ಶುಭ ಹಾರೈಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos