ಬಿಬಿಎಂಪಿ ವಿರುದ್ಧ ಕಿಚ್ಚ ಕಿಡಿ

ಬಿಬಿಎಂಪಿ ವಿರುದ್ಧ ಕಿಚ್ಚ ಕಿಡಿ

ಬೆಂಗಳೂರು, ಜು. 25 : ಮಳೆಯಿಂದಾಗಿ ತೀರಾ ಹದಗೆಟ್ಟಿರುವ ರಸ್ತೆಯನ್ನು ದುರಸ್ಥಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಗರಂ ಆಗಿದ್ದಾರೆ.
“ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ಆದರೆ ಆ ರಸ್ತೆಯಲ್ಲಿಯೇ ಜನರು ಪ್ರತಿನಿತ್ಯ ಕಷ್ಟಪಟ್ಟು ಓಡಾಡುತ್ತಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನಾವು ನೆನಪಿಸಬೇಕಾಗಿರುವುದು ವಿಷಾದಕರವಾಗಿದೆ. ದಯವಿಟ್ಟು ಈ ಕಡೆ ತಕ್ಷಣ ಗಮನಿಸಿ” ಎಂದು ಪ್ರಿಯಾ ಸುದೀಪ್ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ವೀಟ್ ಮಾಡುವ ಮೂಲಕ ಅವರ ಕರ್ತವ್ಯವನ್ನು ನೆನಪಿಸಿಕೊಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos