ಬೆಂಗಳೂರು, ಜೂ.25: ದೇವನಹಳ್ಳಿ, ಅಪಘಾತಗಳಿಗೆ ಕಾರಣವಾಗ್ತಿರೋ ಖಾಸಗಿ ಬಸ್ಗಳನ್ನ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನ ನಡೆಸಿದ್ರು. ಪಟ್ಟಣದ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನ ನಡೆಸಿದ ಕರವೇ ಶಿವರಾಮೇಗೌಡರ ಬಣದ ಕಾರ್ಯಕರ್ತರು ಆರ್ಟಿಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಅಂದಹಾಗೆ ವಿಜಯಪುರ ಮಾರ್ಗವಾಗಿ ಬೆಂಗಳೂರಿಗೆ ಹತ್ತಾರು ಬಸ್ಗಳು ಸಂಚಾರ ನಡೆಸುತ್ತವೆ. ಆದ್ರೆ ಬಸ್ಗಳು ವೇಗವನ್ನ ಕಡಿಮೆ ಮಾಡಿಕೊಳ್ಳದೇ ಅತಿವೇಗದಲ್ಲಿ ಸಂಚಾರ ನಡೆಸುತ್ತಿದ್ದು, ನೆನ್ನೆಯಷ್ಟೆ ಪಟ್ಟಣದ ಗಿರಿಜಾ ಶಂಕರ್ ಕಲ್ಯಾಣ ಮಂಟಪದ ಬಳಿ ಓರ್ವ ವ್ಯಕ್ತಿಯ ಸಾವಿಗೆ ಬಸ್ ಕಾರಣವಾಗಿದೆ. ಇದ್ರಿಂದ ರೊಚ್ಚಿಗೆದ್ದಿರುವ ಕರವೇ ಕಾರ್ಯಕರ್ತರು ಹಾಗೂ ಸ್ಥಳೀಯರು ಖಾಸಗಿ ಬಸ್ಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ.