ಖರ್ಗೆ ಕೋಟೆಗೆ ಲಗ್ಗೆಯಿಟ್ಟ ರತ್ನಪ್ರಭಾ

ಖರ್ಗೆ ಕೋಟೆಗೆ ಲಗ್ಗೆಯಿಟ್ಟ ರತ್ನಪ್ರಭಾ

ಕಲಬುರಗಿ, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಕಲಬುರಗಿಯಲ್ಲಿ ಇಂದು ರತ್ನಪ್ರಭಾ ಅವರು ಸೇಡಂ ಇನ್ನಿತರೆಡೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರವಾಗಿ ಪ್ರಚಾರ ನಡೆಸಿದರು. ಖರ್ಗೆಯವರ ಒಂದು ಕಾಲದ ಶಿಷ್ಯರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ಎ.ಬಿ.ಮಾಲಕರೆಡ್ಡಿಯವರು ಈಗ ಬಿಜೆಪಿ ಸೇರಿ ಖರ್ಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಈಗ ರತ್ನಪ್ರಭಾ ಅವರು, ಬಿಜೆಪಿ ಪರ ಪ್ರಚಾರ ಕಣಕ್ಕೆ ಇಳಿದಿದ್ದಾರೆ.

ನಿನ್ನೆಯಷ್ಟೇ ಖರ್ಗೆ ಪರ ಪ್ರಚಾರಕ್ಕೆ ಆಗಮಿಸಿದ್ದ ಬಾಬುರಾವ್ ಚೌವ್ಹಾಣ್, ಸುಭಾಷ್ ರಾಠೋಡ್‍ಗೆ ಲಂಬಾಣಿ ಸಮುದಾಯದ ಜನ ತರಾಟೆಗೆ ತೆಗೆದುಕೊಂಡಿದ್ದರು. ನಮ್ಮ ಸಮುದಾಯದ ಮುಖಂಡರೊಬ್ಬರಿಗೆ ಮಾತ್ರವೇ ಲೋಕಸಭೆ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಹೀಗಾಗಿ ಅವರ ವಿರುದ್ಧ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.

ಇಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ರೇವೂ ನಾಯಕ್ ಬೆಳಮಗಿಯವರು ಖರ್ಗೆ ಪರ ಪ್ರಚಾರಕ್ಕ ಹೋದಾಗ ಬಂಜಾರ ಸಮುದಾಯದವರು ಇದೇ ರೀತಿ ಬಿಸಿ ಮುಟ್ಟಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos