ಬೆಂಗಳೂರು, ಆ. 29: ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ ಎಸ್ ಯಡಿಯೂರಪ್ಪ ಅವರು, ಗೂಳಿಹಟ್ಟಿ ಶೇಖರ್ ಮತ್ತು ತಿಪ್ಪಾರೆಡ್ಡಿಯವರಿಗೆ, ಪಕ್ಷ ಹಾಕಿದ ಗೆರಯನ್ನು ದಾಟಬೇಡಿ, ಇಲ್ಲವೇ ಸಚಿವರಾಗುವ ಅವಕಾಶವನ್ನು ಕಳೆದುಕೊಳ್ಳಿ’ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಇಬ್ಬರು ಕೂಡ ಹೈಕಮಾಂಡ್ ಹಾಗೂ ಪಕ್ಷದ ವಿರುದ್ದ ಸಮರ ಸಾರಿ ಬಹಿರಂಗವಾಗಿ ತಮ್ಮ ಅಸಮಾಧಾವನ್ನು ವ್ಯಕ್ತಪಡಿಸಿದ್ದರು, ಇದು ಹೈಕಮಾಂಡ್ ತಿಳಿದಿತ್ತು. ಇನ್ನು ಶ್ರೀರಾಮುಲು ಬೆಂಬಲಿಗರು ತಮ್ಮ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿ, ಚಿತ್ರದುರ್ಗ, ರಾಯಚೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಪ್ರತಿಭಟನೆ ನಿಲ್ಲಿಸುವಂತೆ ಶ್ರೀರಾಮುಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು ಕೂಡ ಇನ್ನು ಪ್ರತಿಭಟನೆ ನಿಂತಿಲ್ಲ.