ಕೆಂದ್ರ ಕಾರಾಗೃಹ ದಾಳಿ

ಕೆಂದ್ರ ಕಾರಾಗೃಹ ದಾಳಿ

ಆನೇಕಲ್,ಏ. 10, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಕೇಂದ್ರ ಕಾರಾಗೃಹ ಕ್ಕೆ ಕಳೆದ ದಿನ ರಾತ್ರಿ ಹಠಾತ್ ಪೋಲೀಸ್ ರು ದಾಳಿ ನಡೆಸಿದ್ದಾರೆ ನಗರ ಸಿಸಿಬಿ ಹೆಚ್ಚುವರಿ ಪೋಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗು ಪೋಲೀಸ್ ಆಯುಕ್ತ ಸುನಿಲ್ ಕುಮಾರ್ ನೇತ್ರತ್ವದಲ್ಲಿ  ನಡೆದಿದ್ದು ನೂರಕ್ಕೂ  ಹೆಚ್ವು ಜನ ಪೋಲೀಸರಿಂದ ನೆನ್ನೆ ಕೈದಿಗಳ ತಪಾಸಣೆ ನಡೆದಿದೆ ಅಲ್ಲದೆ ಲೋಕಸಭಾ ಚುನಾವಣೆ ಹಿನಲೆಯಲ್ಲಿ ದಾಳಿ ನಡೆದಿದ್ದು ಕೈದಿಗಳ ಬಳಿ 15 ಮೊಬೈಲ್ ಗಳು ಸೇರಿದಂತೆ ಮಾದಕ ವಸ್ತು ಹಾಗು ಗಾಂಜಾ ಕೂಡ ದೊರೆತಿದೆ. ಗಾಂಜಾ ಸೇದುವ ಚಿಲಮ್ ಸಹ ಹಲವರ ಬಳಿ ದೊರೆತಿದ್ದು ಎಲ್ಲ ರೌಡಿಗಳಿಗೆ ಯಾವುದೆ ರೀತಿಯ ಚುನಾವಣೆ ಸಮಯದಲ್ಲಿ ಬೆದರಿಕೆ ಅಹಿತಕರ ಚಟುವಟಿಕೆ ಗಳನ್ನು ನಡೆಸದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಈ ಕುರಿತು ಕ್ರಮ ತನಿಕೆ ಕೈಗೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos