ಕೆಣಕಿದರೆ ಕಚ್ಚೋದು ಗ್ಯಾರಂಟಿ : ನಾಗರಾಜ

ಕೆಣಕಿದರೆ ಕಚ್ಚೋದು ಗ್ಯಾರಂಟಿ : ನಾಗರಾಜ

ಬೆಂಗಳೂರು, ಆ. 31 : ‘’ನಾನು ಮೊದಲೇ ನಾಗರಾಜ, ಹಾವನ್ನು ಕೆಣಕಿದರೇ ಬಿಡುತ್ತಾ..? ಕಚ್ಚೋದು ಗ್ಯಾರಂಟಿ. ನನ್ನ ಕೆಣಕಬೇಡಿ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಅಬ್ಬರಿಸಿದ್ದಾರೆ.
ಹುಟ್ಟ ಹಬ್ಬದ ನಿಮಿತ್ಯ ಹೊಸಕೋಟೆಯಲ್ಲಿ ಮಾತನಾಡಿ, 30 ಕೋಟಿ ರೂ. ಆಸೆಗಾಗಿ ನಾನು ರಾಜಕೀಯವಾಗಿ ನನ್ನ ಮಗನನ್ನು ಉದ್ದರಿಸುವ ಸಲುವಾಗಿ ಬಿಜೆಪಿಗೆ ಹೋಗಲು ರಾಜೀನಾಮೆ ನೀಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಆದರೇ ಇದೆಲ್ಲಾ ಬರೀ ಸುಳ್ಳು. 5-10 ಬಾರಿ ಸಚಿವರಾದವರು ಲೂಟಿ ಹೊಡೆದಿರುವ ದಾಖಲೆ ನನ್ನ ಹತ್ತಿರ ಇದೆ. ಅಲ್ಲದೇ ಅಧಿಕಾರದಲ್ಲಿ ಇದ್ದಾಗ ಎಷ್ಟು ಆಸ್ತಿ ಮಾಡಿದ್ದಾರೆ ಯಾರು ಯಾರು ಎಂಬ ದಾಖಲೆಯೂ ನನ್ನ ಬಳಿ ಇದೆ. ಇಂತಹ ದಾಖಲೆಯನ್ನು ಬಹಿರಂಗ ಪಡಿಸಿದರೇ, ಅವರ ರಾಜಕೀಯ ಜೀವನವೇ ಮುಗಿದು ಹೋಗುತ್ತದೆ ಎಂದು ಬುಸುಗುಟ್ಟಿದರು.
ನಾಗರಾಜ, ಹಾವನ್ನು ಕೆಣಕಿದರೇ ಕಚ್ಚದೇ ಬಿಡುವುದಿಲ್ಲ. ಹಾಗೇ ಒಂದು ವೇಳೆ ಕೆಣಕಿದರೇ ಕಚ್ಚೋದು ಗ್ಯಾರಂಟಿ ಎಂದು ಅಬ್ಬರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos