ಬೆಂಗಳೂರು: ಕಿಚ್ಚ ಸುದೀಪ್ ಐದು ವರ್ಷದ ಹಿಂದೆ ಇಡೀ ಸ್ಯಾಂಡಲ್ವುಡ್ನನ್ನ ಒಂದು ಮಾಡೋಕೆ ಹುಟ್ಟುಹಾಕಿದ್ದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಈಗ ನಾಲ್ಕನೇ ಆವೃತ್ತಿಗೆ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ. ಕೆಸಿಸಿ ಸೀಸನ್ 4ರ ಕನ್ನಡ ಸ್ಟಾರ್ಸ್
ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೆ ನಡೆಸುವ ಕನ್ನಡ ಚಲನಚಿತ್ರ ಕಪ್ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯ ನಿನ್ನೆ ನಡೆಯಿತು. ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ‘ಗಂಗ ವಾರಿಯರ್ಸ್ʼ ತಂಡ ಶಿವರಾಜ್ಕುಮಾರ್ ನಾಯಕತ್ವದ ‘ರಾಷ್ಟ್ರಕೂಟ ಪ್ಯಾಂತರ್ಸ್’ ತಂಡವನ್ನು ನಾಲ್ಕು ರನ್ಗಳಿಂದ ಮಣಿಸಿದೆ. ಈ ಮೂಲಕ ಗಣೇಶ್ ತಂಡ ನಾಲ್ಕನೇ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಸೆಂಬರ್ 23, ಡಿಸೆಂಬರ್ 24 ಹಾಗೂ ಡಿಸೆಂಬರ್ 25ರಂದು ಕೆಸಿಸಿ ಪಂದ್ಯಗಳು ನಡೆದವು. ಗಣೇಶ್, ಸುದೀಪ್, ದುನಿಯಾ ವಿಜಯ್ ಸೇರಿ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು. ಗಣೇಶ್ ತಂಡ ಲೀಗ್ ಮ್ಯಾಚ್ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ನ ಗೆದ್ದಿತ್ತು. ಫಿನಾಲೆ ತಲುಪಿ ಕಪ್ ಗೆದ್ದಿದೆ. ಶಿವಣ್ಣನ ನಾಯಕತ್ವದ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಂಗಾ ವಾರಿಯ್ಸ್ ತಂಡ 10 ಓವರ್ನಲ್ಲಿ ಐದು ವಿಕೆಟ್ ನಷ್ಟಕ್ಕೆ 111 ರನ್ಗಳನ್ನು ಕಲೆ ಹಾಕಿತು. ರಾಷ್ಟ್ರಕೂಟ ತಂಡವು ಉತ್ತಮ ಆರಂಭವನ್ನೇ ಕಂಡಿತು. ಆದರೆ, ಟಾರ್ಗೆಟ್ ರೀಚ್ ಆಗುವ ಮೊದಲು ಸೋಲು ಒಪ್ಪಿದರು.