ಬೆಳಗಾವಿ, ಮಾ.30, ನ್ಯೂಸ್ ಎಕ್ಸ್ ಪ್ರೆಸ್: ಚಿಕ್ಕೋಡಿ ಬಿಜೆಪಿ ಟಿಕೆಟ್ ಅಣ್ಣಾಸಾಹೇಬ ಜೊಲ್ಲೆಗೆ ಘೋಷಣೆಯಾದಹಿನ್ನೆಲೆಯಲ್ಲಿ ಟಿಕೆಟ್ ಮರು ಪರಿಶೀಲನೆ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಕತ್ತಿ ಸಹೋದರರು ಮನವಿ ಮಾಡಿಕೊಂಡಿದ್ದಾರೆ.
ಹುಕ್ಕೇರಿ ಶಾಸಕ ಉಮೇಶ ಕತ್ತಿ ಬೆಲ್ಲದ ಬಾಗೇವಾಡಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಏಪ್ರಿಲ್ 4 ರವರೆಗೆ ಕಾದು ನೋಡಿ, ಅಂದು ಏನೆಂಬುದು ಹೇಳುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು 2-3 ದಿನಗಳ ಕಾಲ ಕಾಯ್ದು ನೋಡುವ ತಂತ್ರ ಅವರದ್ದಾಗಿದೆ,ಸಹೋದರ ರಮೇಶ ಕತ್ತಿ ಗೆ ಟಿಕೆಟ್ ಸಿಗಬೇಕಿತ್ತು, ಅಣ್ಣಾಸಾಹೇಬ ಜೊಲ್ಲೆ ಅವರಿಗೂ ಅದಮ್ಯ ಉತ್ಸಾಹ ಇದೆ, ಅವರ ಉತ್ಸಾಹ ನೋಡಿ ಟಿಕೆಟ್ ಕೊಟ್ಟಿರಬಹುದು ಎಂದು ಹೇಳಿದರು.