ಹುಬ್ಬಳ್ಳಿ, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಬಿಸಿಲ ಮಧ್ಯೆ ಕುಂದಗೋಳ ಉಪಚುನಾವಣೆ ಕಾವು ಏರಿದೆ. ಕುಂದಗೋಳ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಕಟ್ಟಾ ಸುಬ್ರಮಣ್ಯನಾಯ್ಡು ಡಿಕೆಶಿ ವಿರುದ್ಧ ಕೆಂಡಕಾರಿದ್ರು. “ ಡಿಕೆ ಶಿವಕುಮಾರ್ ದೇವಮಾನವನಲ್ಲ. ನಮ್ಮ ಹಾಗೇ ಮನುಷ್ಯರು. ನಮ್ಮ ಪಕ್ಷದಲ್ಲಿಯೂ ಸಮರ್ಥ ಲೀಡರ್ ಇದ್ದಾರೆ. ಡಿಕೆಶಿ ಬಂದಿದ್ದಾರೆ ಎಂದು ನಾವು ಹೆದರಲ್ಲ” ಮುಂಬೈ ಕರ್ನಾಟಕದಲ್ಲಿ ನಾಯಕರ ಕೊರತೆ ಇಲ್ಲ. ಅವರಷ್ಟೇ ಯುಕ್ತಿ ಶಕ್ತಿ ಇರುವವರು ಇಲ್ಲಿ ಇದ್ದಾರೆ ಅಂತ ಕಾಲೆಳೆದ ರು.
ಮತ್ತೆ ಬಿಎಸ್ವೈ ಬಾಂಬ್.!
ಮೇ. 23 ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೆ ಬಾಂಬ್ ಸಿಡಿಸಿದ್ದಾರೆ. ಇದೇ ವೇಳೆ ಕುಂದಗೋಳ, ಚುಂಚೋಳಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸೋದಾಗಿ ವಿಶ್ವಾಸವ್ಯಕ್ತಪಡಿಸಿದರು.