ದ್ರಾಸ್, ಜು. 27 : ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡೀ ಜಮ್ಮು-ಕಾಶ್ಮೀರದ ಮೇಲೆ ಭಾರತ ಸಂಪೂರ್ಣ ಹಕ್ಕು ಹೊಂದಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
”ಪಾಕ್ ಆಕ್ರಮಿತ ಪಾಕಿಸ್ತಾನ ಹಿಂಪಡೆಯುವುದು ಹೇಗೆಂಬುದನ್ನು ಸರಕಾರ ನಿರ್ಧರಿಸಲಿದೆ. ಅದನ್ನು ರಾಜತಾಂತ್ರಿಕವಾಗಿ ಹಿಂಪಡೆಯಬೇಕೇ ಅಥವಾ ಬೇರೆ ವಿಧಾನದಲ್ಲೋ ಎಂಬುದು ರಾಜಕೀಯ ತೀರ್ಮಾನ. ಯಾವುದೇ ಆದೇಶ ಬಂದರೂ ಸೇನೆ ಪಾಲಿಸಲಿದೆ,” ಎಂದೂ ಅವರು ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧದ 20ನೇ ವರ್ಷದ ವಿಜಯೋತ್ಸವದ ಅಂಗವಾಗಿ ಶುಕ್ರವಾರ ಕಾರ್ಗಿಲ್ ವಲಯದ ದ್ರಾಸ್ನಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರದ ಇತಿಹಾಸ ವಿವರಿಸುತ್ತಲೇ ಮತ್ತೊಮ್ಮೆ ನೆರೆ ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದರು.