ಕೆ. ಆರ್. ಪುರ, ಜು. 12: ಅನುಮತಿ ಇಲ್ಲದೆ ರಸ್ತೆ ಅಗೆದರೆ ಕ್ರಮ ಕೈಗೊಳ್ಳುವಂತೆ ಹಿರಿಯೂರು ಶಾಸಕರು ಕೆಆರ್ಪುರ ವಾರ್ಡ್ ಪಾಲಿಕೆ ಸದಸ್ಯರಾದ ಪೂರ್ಣಿಮಾ ಶ್ರೀನಿವಾಸ್ ಇಂದಿಲ್ಲಿ ತಿಳಿಸಿದರು.
ಭಟ್ಟರಹಳ್ಳಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಟ್ಟರಹಳ್ಳಿಯ ಅಡ್ಡರಸ್ತೆಗಳಿಗೆ ಇಂದು ಡಾಂಬರೀಕರಣ ಮಾಡಿಸುತ್ತಿದ್ದು, ಗುಣಮಟ್ಟದೊಂದಿಗೆ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪ್ರಸ್ತುತ ರಾಜಕಾರಣದಲ್ಲಿ ಅನುದಾನ ತರುವುದು ತುಂಬ ಕಷ್ಟಕರ ಕೆಲಸ ತಂದ ಅನುದಾನವನ್ನು ಸಮರ್ಪಕವಾಗಿ ವಾರ್ಡ್ನ ಎಲ್ಲಾ ಬಡಾವಣೆಗಳಿಗೂ ಅಭಿವೃದ್ಧಿ ಕೆಲಸ ಮಾಡಿಸುತ್ತಿರುವುದಾಗಿ ತಿಳಿಸಿದರು.
ಕಸವನ್ನು ಎಲ್ಲೆಂದರಲ್ಲಿ ಹಾಕಿದರೆ ದಂಡ ಗ್ಯಾರೆಂಟಿ ಈಗಲಾದರೂ ಎಚ್ಚೆತ್ತು ನಿಗದಿತ ಸ್ಥಳ ಅಥವಾ ಬಿಬಿಎಂಪಿ ವಾಹನಗಳಿಗೆ ಕಸ ಹಾಕುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರವಾಗಲಿದ್ದು, ದಿನನಿತ್ಯ ನೀರನ್ನು ಮಿತವಾಗಿ ಬಳಕೆ ಮಾಡಿ ಅಲ್ಲದೆ, ಪ್ರತಿಯೊಬ್ಬರೂ ಸಸಿನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.
ವಾರ್ಡ್ ಅಧ್ಯಕ್ಷ ಜಿಮ್ರಮೇಶ, ಮುಖಂಡರಾದ ಸುಬ್ರಮಣಿ, ನಾರಾಯಣಪ್ಪ, ವಿನು, ಶಾಂತಕುಮಾರ್, ಗುತ್ತಿಗೆದಾರ ಗೋಪಾಲ್ಗೌಡ ಮತ್ತಿತರರಿದ್ದರು.