ಹೈದರಾಬಾದ್, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿ ವಾಯುವ್ಯ ಪ್ರಾಂತದಿಂದ ತಮಿಳುನಾಡು ಮೂಲಕ ರಾಯಲಸೀಮವರೆಗೂ ಮಾರುತಗಳು ಬಲಹೀನಗೊಂಡಿವೆ. ಅದಕ್ಕಾಗಿ 4 ರಾಜ್ಯಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಅಧಿಕಾರಿ ರಾಜಾರಾವು ಎಚ್ಚರಿಕೆ ನೀಡಿದ್ದಾರೆ.
ಮೋಡ ಕವಿದ ವಾತವಾರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರದ ಸಮುದ್ರ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಆಂಧ್ರ ಹವಾಮಾನ ಕೇಂದ್ರಕ್ಕೆ, ತೆಲಂಗಾಣ ಹವಾಮಾನ ಇಲಾಖೆ ಮಾಹಿತಿ ನೀಡಿದೆ.