ಬೆಂಗಳೂರು, ನ. 01: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಕಡೆಯಿಂದ ಬೆಂಗಳೂರು ದಕ್ಷಿಣ ವಿಭಾಗದ ಕೊತ್ತನೂರು ದಿಣ್ಣೆಯ ಘಟಕ 34 ನಲ್ಲಿ 64 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ಶ್ರೀ ಎನ್ ಚಂದ್ರಶೇಖರ್ ರವರಿಂದ ಘಟಕದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಇದೆ ಸಂದರ್ಭದಲ್ಲಿ ವಿಜಯ ಕಾಲೇಜ್ ಪ್ರಾಂಶುಪಾಲರಾದಂತಹ ಡಾಕ್ಟರ್ ಆರ್ ವಾದಿ ರಾಜು, ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದಂತಹ ಎಂ ಲೋಕೇಶ್ ಉಪಾಧ್ಯಕ್ಷರಾದಂತಹ ಜಯತೀರ್ಥ ಕುಮಾರ ಮತ್ತು ಹಬಿಬುಲ್ಲಾ ಖಾನ್ ಕನ್ನಡ ಕ್ರಿಯಾ ಸಮಿತಿಯ ಘಟಕದಿಂದ ಸನ್ಮಾನಿಸಲಾಯಿತು.