‘ಕಾರ್ನಾಡ್ ಅವರು ಧರ್ಮ ವಿರೋಧಿ ಅಲ್ಲ’

 ‘ಕಾರ್ನಾಡ್ ಅವರು ಧರ್ಮ ವಿರೋಧಿ ಅಲ್ಲ’

ಬೆಂಗಳೂರು: ವಿಧಿವಿಧಾನಗಳನ್ನು ನಂಬದ ಗಿರೀಶ ಕಾರ್ನಾಡ್ ಅವರು ಧರ್ಮ ವಿರೋಧಿ ಆಗಿರಲಿಲ್ಲ. ಆದರೆ, ಧರ್ಮಾತೀತವಾಗಿ ಬದುಕಿದವರು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಮಂಗಳವಾರ ಆಯೋಜಿಸಿ ಗಿರೀಶ  ಕಾರ್ನಾಡ ಶ್ರದ್ಧಾಂಜಲಿ ಸಣೆಯಲ್ಲಿ ಮಾತನಾಡಿದರು.

ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಕಾರ್ನಾಡ್ ಕೊಡುಗೆ ಅಪಾರವಾಗಿ ನೀಡಿದ್ದಾರೆ. ಅವರು ದೇಶದಲ್ಲಿ ಚಲನಶೀಲ ಪರಂಪರೆಯ ಭಾಗವಾಗಿ ಉಳಿದಿದ್ದಾರೆ ಎಂದರು. ಅವರು ಸಾಹಿತ್ಯ ಕೃಷಿಯಲ್ಲಿ ಅನುಸಂಧಾನದ ಮಾರ್ಗ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಮುಖಾಮುಖಿಯ ಮಾರ್ಗ ಕಾಣುತ್ತೇವೆ. ಮುಂಬೈ, ಆಕ್ಸ್ ಫರ್ಡ್ ಸುತ್ತಿದ ಕಾರ್ನಾಡರು ಬೆಂಗಳೂರಿನಲ್ಲಿ ವಿಕಾಸಗೊಂಡರು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos