ಹಾಸನದ ಕರಿ ಎತ್ತು, ಮತ್ತೊಂದು ಕನಕಪುರದ ಬಿಳಿ ಎತ್ತು: ಮಂಡ್ಯದ ರೈತ

ಹಾಸನದ ಕರಿ ಎತ್ತು, ಮತ್ತೊಂದು ಕನಕಪುರದ ಬಿಳಿ ಎತ್ತು: ಮಂಡ್ಯದ ರೈತ

ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದ ರೈತರೊಬ್ಬರು ಸಿಎಂ ‘ನಾನು ಮತ್ತು ಡಿಕೆಶಿ ಜೋಡೆತ್ತು’ ಎಂದಿದ್ದರ ಬಗ್ಗೆ ಲೇವಡಿ ಮಾಡಿದ್ದಾರೆ. ಇವೆರಡು ನಿಜವಾದ ಜೋಡೆತ್ತುಗಳಲ್ಲ, ಕಳ್ಳೆತ್ತುಗಳು. ಇವು ಒಂಟೆತ್ತುಗಳು, ಇವನ್ನ ನಾವೇ ಕಳೆದ ಅಯ್ಯನ ಗುಡಿ ಜಾತ್ರೆಯಲ್ಲಿ ತಂದು ಜೊತೆಯಾಕಿದ್ದೀವಿ‌. ಇದರಲ್ಲಿ ಒಂದು ಹಾಸನದ ಕರಿ ಎತ್ತು, ಮತ್ತೊಂದು ಕನಕಪುರದ ಬಿಳಿ ಎತ್ತು ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ ಹಾಸನದ ಕರಿ ಎತ್ತಿನ‌ ಜೊತೆ ಸೇರಿಕೊಂಡು ಈ ಕನಕಪುರದ ಬಿಳಿ ಎತ್ತು ಕೆಟ್ಟೋಗಿದೆ.  ನಾವು ಕನಕಪುರ ಬಿಳಿ ಎತ್ತಿಗೆ ಕಿವಿ ಮಾತು ಹೇಳ್ತಿದ್ದೇವೆ. ಕಳೆದ ಎರಡು ವರ್ಷದ ಹಿಂದೇ ಕಾಂಗ್ರೆಸ್​​ ಸರ್ಕಾರಕ್ಕೆ ಸಿಎಂ ಕುಮಾರಸ್ವಾಮಿ ಮಾಡಿದ ದ್ರೋಹ ಮರೆತುಬಿಟ್ರಾ ಎಂದು ರೈತ ಸಚಿವ ಡಿ.ಕೆ ಶಿವಕುಮಾರ್​​ ಅವರಿಗೆ ಪ್ರಶ್ನಿಸಿದ್ದಾರೆ. ಈ ರೈತನ ವ್ಯಂಗ್ಯದ ಲೇವಡಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos