ಕರಾವಳಿಯಲ್ಲೂ ಮುಂಗಾರು ಅಬ್ಬರ

ಕರಾವಳಿಯಲ್ಲೂ ಮುಂಗಾರು ಅಬ್ಬರ

ಬೆಂಗಳೂರು, ಜು.11: ಕರಾವಳಿಯಲ್ಲಿ ಮುಂಗಾರು ಬಿರುಸಿನಿಂದ ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಮಂಗಳೂರು ನಗರದ ರಸ್ತೆಗಳು ಹೊಳೆಯಂತೆ ತುಂಬಿಕೊಂಡಿವೆ. ಇತ್ತ ಕಡಲ್ಕೊರೆತವೂ ಹೆಚ್ಚಾಗಿದ್ದು, ತೀರದಲ್ಲಿರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಸಮುದ್ರದ ಅಲೆಗಳು 4ಮೀಟರ್ ಎತ್ತರಕ್ಕೆ ತೀರಕ್ಕೆ ಅಪ್ಪಳಿಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಎರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಶ್ರೀಮಂಗಲ, ಕುಟ್ಟ ಸುತ್ತಮುತ್ತ ಜೋರು ಮಳೆ ಆಗಿದೆ. ಹಾರಂಗಿ ಡ್ಯಾಂನಲ್ಲಿ ನೀರೇ ಇಲ್ಲ. ಇತ್ತ ಬರದ ನಾಡು ರಾಯಚೂರಿನಲ್ಲಿ ಧಾರಾಕಾರ ಮಳೆ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos