ಬೆಂಗಳೂರು, ಜೂ. 26: ಕನ್ನಡ ಚಿತ್ರಂಗದಲ್ಲಿ ಕನ್ನಡಿಗರ ಮನ ಗೆದ್ದ ಚೆಲುವೆ ರಚಿತಾ ರಾಮ್. ಹೌದು, ರಚಿತಾ ರಾಮ್ ಅಂದರೆ ಅಭಿಮಾನಿಗಳಿಗೆ ಹೆಚ್ಚು ಪ್ರೀತಿ. ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರು ಚಿತ್ರ ವೆಂದರೆ ಅದು ಅಮರ. ಹೌದು, ʼಅಮರ್ʼ ಚಲನಚಿತ್ರದ ನಂತರ ತಮ್ಮ ಮುಂದಿನ ಸಿನಿಮಾಕ್ಕೆ ನಾಗಶೇಖರ್ ಸಜ್ಜಾಗುತ್ತಿದ್ದಾರೆ.
ಈ ಹಿಂದಿನ ʼಸಂಜು ವೆಡ್ಸ್ ಗೀತಾʼ ಹಾಗೂ ʼಮೈನಾʼ ಅಂತೆಯೇ ಸುಂದರ ಕಥಾಹಂದರ ಹೊಂದಿರುವ ʼಸಂಜಯ್ ಅಲಿಯಾಸ್ ಸಂಜುʼ ಸಿನಿಮಾಕ್ಕೆ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.
ರಚಿತಾರಾಮ್ ನಟಿಸುವುದು ಖಾತ್ರಿಯಾಗಿದ್ದು, ಸದ್ಯ ನಾಯಕ ನಟನ ಹುಡುಕಾಟದಲ್ಲಿದ್ದೇವೆ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ ಎಂದು ನಾಗಶೇಖರ್ ಹೇಳಿದ್ದಾರೆ.