ಕಂದನಿಲ್ಲದ ಪರಿಹಾರ ಏನ್ಮಾಡಲಿ

ಕಂದನಿಲ್ಲದ  ಪರಿಹಾರ ಏನ್ಮಾಡಲಿ

ಕೊಪ್ಪಳ, ಆ.  19 : ಕಂದ ನಿಲ್ಲದ ಮೇಲೆ ಪರಿಹಾರ ತಗೊಂಡು ಏನ್ಮಾಡಲಿ ಎಂದು ಕಂದನ ಸಾವಿನ ಸುದ್ದಿ ತಿಳಿದ ತಾಯಿ ಗೋಗರೆಯುತ್ತಿರುವ ಘಟನ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆಯಲ್ಲಿ ಮನೆ ಕಳೆದುಕೊಂಡವರಿಗೆ ಕೊಡ್ರಿ ಎಂದ ಮೃತ ವಿದ್ಯಾರ್ಥಿ ದೇವರಾಜ್ ಅವರ ತಾಯಿ ದೇವಮ್ಮ, ನೋವಿನಲ್ಲೂ ಮಾನವೀಯತೆ ಮೆರೆದರು.
ತಾಲೂಕಿನ ಮಾದಿಗನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೇಳಿದರು. ಬಾಳಿಬದುಕಬೇಕಾದ ಮಗನನ್ನೇ ಕಳೆದುಕೊಂಡ ಮೇಲೆ ಹಣ ತೆಗೆದುಕೊಂಡು ಏನು ಮಾಡಬೇಕು. ದೇವರು ದುಡಿಯುವ ಶಕ್ತಿ ಕೊಟ್ಟಿದ್ದಾನೆ. ಬೇಕಾದ್ರೆ ಪರಿಹಾರ ಬಾಗಲಕೋಟದಲ್ಲಿ ಮನೆ ಮುಳುಗಿದವ್ರಿಗೆ ನೀಡಲಿ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos