ಕಮಲೇಶ್ ಗೆ ಆಯುಧದಿಂದ ಇರಿದ ಹಂತಕರು!

ಕಮಲೇಶ್ ಗೆ ಆಯುಧದಿಂದ ಇರಿದ ಹಂತಕರು!

ಲಖನೌ, ಅ.23 : ಉತ್ತರ ಪ್ರದೇಶದ ಲಖನೌದಲ್ಲಿ ಹತ್ಯೆಗೀಡಾದ ಹಿಂದು ನಾಯಕ ಕಮಲೇಶ್ ತಿವಾರಿ ಮೇಲೆ ಹಂತಕರು ಗುಂಡು ಹಾರಿಸಿದ್ದಲ್ಲದೇ ಅವರಿಗೆ 15 ಬಾರಿ ಇರಿದಿದ್ದರು ಎಂಬ ಸಂಗತಿ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.
ತಿವಾರಿ ಅವರ ಗದ್ದದ ಕೆಳಭಾಗದಲ್ಲಿ ಪಾಯಿಂಟ್ 32 ಬೋರ್ ಪಿಸ್ತೂಲ್ನ ಗುಂಡು ಒಳಹೊಕ್ಕಿದೆ. ಮೃತದೇಹದ ಮೇಲೆ 15 ಗಾಯದ ಗುರುತಗಳಿವೆ. ಅವರ ಮುಖ, ಎದೆ ಹಾಗು ಕುತ್ತಿಗೆ ಭಾಗದಲ್ಲಿ ಹರಿತವಾದ ಆಯುಧಗಳಿಂದ ತಿವಿದ ಗಾಯಗಳು ಕಂಡುಬಂದಿವೆ ಎಂದು ವರದಿ ತಿಳಿಸಿದೆ. ”ಹಂತಕರು ತಿವಾರಿ ಅವರ ಮುಖಕ್ಕೆ ಮೊದಲ ಗುಂಡು ಹಾರಿಸುವ ಸಂದರ್ಭದಲ್ಲಿಅದು ಪಿಸ್ತೂಲ್ನಲ್ಲಿಯೇ ಸಿಕ್ಕಿಹಾಕಿಕೊಂಡಿರಬಹುದು. ಎರಡನೇ ಗುಂಡು ಹಾರಿಸುವ ಮುನ್ನ ಅವರ ಎದೆಗೆ ಹರಿತವಾದ ಆಯುಧಗಳಿಂದ ಚುಚ್ಚಿ ಕತ್ತು ಸೀಳಿ ಸಾಯಿಸಲು ಪ್ರಯತ್ನಿಸಿರುವ ಸಾಧ್ಯತೆಗಳನ್ನು ಇದು ಸೂಚಿಸುತ್ತದೆ,” ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos