ಚೆನ್ನೈ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ಹಿರಿಯ ನಟ,ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ ಹಾಸನ್ ಮೇಲೆ ಯಾರೋ ಕಿಡಿಗೇಡಿಗಳು ಮೊಟ್ಟೆ, ಕಲ್ಲು ಎಸೆದಿದ್ದಾರೆ. ಕಳೆದ ರಾತ್ರಿ ಮಿಳುನಾಡಿನ ಕರೂರ್ ಜಿಲ್ಲೆಯ ಅರವಕುರಿಚಿಯಲ್ಲಿ ನಡೆಯುತ್ತಿದ್ದ ಕಮಲ್ ಹಾಸನ್ ಪಾಲ್ಗೊಂಡಿದ್ರು. ಇದೇ ವೇಳೆ ಜನರ ಮಧ್ಯೆದಿಂದ ಕಮಲ ಹಾಸನ್ ಮೇಲೆ ಮೊಟ್ಟೆ, ಕಲ್ಲುಗಳು ತೂರಿಬಂದಿದೆ. ತಕ್ಷಣವೇ ಪೊಲೀಸರು ಕ್ರಮ ಕೈಗೊಂಡಿದ್ದರಿಂದ ಯಾರಿಗೂ ಅಪಾಯವಾಗಿಲ್ಲ.
ಚಪ್ಪಲಿ ಎಸೆದಿದ್ದ ಕಿಡಿಗೇಡಿಗಳು!
ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅದಾಗಿ 1 ದಿನದಲ್ಲಿ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದ ಘಟನೆ ವರದಿಯಾಗಿದೆ.