ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು : ತಮಿಳುನಾಡು ಸಚಿವ

ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು : ತಮಿಳುನಾಡು ಸಚಿವ

ತಮಿಳುನಾಡು, ಮೇ . 14, ನ್ಯೂಸ್ ಎಕ್ಸ್  ಪ್ರೆಸ್:    ಹಿರಿಯ ನಟ, ಎಂಎನ್‍ಎಂ ಪಕ್ಷದ ಸಂಸ್ಥಾಪಕ ಕಮಲಹಾಸನ್‍ ಹೇಳಿಕೆ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಮಲಹಾಸನ್‍ ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ’ ಎಂದು ಹೇಳಿಕೆ ನೀಡಿದ್ರು.ಕಮಲ್‍ ಹೇಳಿಕೆ ವಿರುದ್ಧ ಕಿಡಿಕಾರಿದ ಎಐಎಡಿಎಂಕೆ ಸಚಿವ ರಾಜೇಂದ್ರ ಬಾಲಾಜಿ ‘ಕಮಲ್ ಹಾಸನ್ ಅವರ ನಾಲಿಗೆ ಕತ್ತರಿಸಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂಸೆಯನ್ನು ಬಿತ್ತುತ್ತಿರೋ ‘ಎಂಎನ್‍ಎಂ’ ನಿಷೇಧಿಸಬೇಕು. ಚುನಾವಣೆಯ ಕಾಯ್ದೆಯ ಅನ್ವಯ ಕಮಲಹಾಸನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಆಗ್ರಹಿಸಿದ್ದಾರೆ. “ ಭಯೋತ್ಪಾದನೆಗೆ ಧರ್ಮ ಇಲ್ಲ. ಭಯೋತ್ಪಾದಕ ಹಿಂದೂ ಅಲ್ಲ. ಮುಸ್ಲಿಂ ಅಥವಾ ಕ್ರೈಸ್ತನೂ ಅಲ್ಲ” ಎಂದು ರಾಜೇಂದ್ರ ಬಾಲಾಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಮಲಹಾಸನ್‍ ಹೇಳಿಕೆ ತಮಿಳುನಾಡಿನಲ್ಲಿ ರಾಜಕೀಯ ಕಿಚ್ಚು ಹೊತ್ತಿಸಿರೋದಂತೂ ನಿಜ.

 

ಫ್ರೆಶ್ ನ್ಯೂಸ್

Latest Posts

Featured Videos