ದಾವಣಗೆರೆ, ಮೇ. 16, ನ್ಯೂಸ್ ಎಕ್ಸ್ ಪ್ರೆಸ್: ದಾವಣಗೆರೆ ಜಿಲ್ಲೆಯ ಆರುಂಡಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿದ ಪರಿಣಾಮ 60ಕ್ಕೂ ಹೆಚ್ಚು ಜನರು ಅಸ್ವಸ್ತಗೊಂಡಿರುವ ಘಟನೆ ನಡೆದಿದೆ.
ಗಂಗಾಧರಪ್ಪ ಎಂಬುವರ ಹೊಸ ಮನೆಯ ಗೃಹ ಪ್ರವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ದೂರದ ಅನೇಕ ಊರುಗಳಿಂದ ಸ್ಥಳೀಯರು ಸೇರಿದಂತೆ ಅನೇಕ ಜನರು, ಸಂಬಂಧಿಕರು ಆಗಮಿಸಿದ್ದರು.
ಹೀಗೆ ಆಗಮಿಸಿದ ಜನರು ಗಂಗಾಧರಪ್ಪ ಅವರು ಗೃಹ ಪ್ರವೇಶದ ಪೂಜೆ ಮುಗಿದ ನಂತರ ಆಹಾರ ಸೇವಿಸಿದಾಗ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ತಗೊಂಡ ಜನರನ್ನು ನ್ಯಾಮತಿಯಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.