ಕಲುಷಿತ ಆಹಾರ ಸೇವಿಸಿ 107 ಜನ ಅಸ್ವಸ್ಥ

ಕಲುಷಿತ ಆಹಾರ ಸೇವಿಸಿ 107 ಜನ ಅಸ್ವಸ್ಥ

ಅಕೋಲಾ, ಏ. 15, ನ್ಯೂಸ್ ಎಕ್ಸ್ ಪ್ರೆಸ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜನ್ಮಜಯಂತಿ ಸಮಾರಂಭ ಸಂದರ್ಭದಲ್ಲಿ ಕಲುಷಿತ ಆಹಾರ ಸೇವಿಸಿ 107 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ಹಿಂಗಾನಿಯ ಭೀಮ್ತೆಕ್ಡಿಯಲ್ಲಿ  ಕಲುಷಿತ ಆಹಾರ ಸೇವಿಸಿ 107 ಜನರು ಅಸ್ವಸ್ಥರಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಹಾರ ಸೇವಿಸಿದ ನಂತರ ಅನೇಕರು ಅಸ್ವಸ್ಥಗೊಂಡರು, ಕೆಲವರಿಗೆ ವಾಂತಿಯಾಯಿತು. ತಕ್ಷಣ ಅವರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ಧಾರೆ.

 

ಫ್ರೆಶ್ ನ್ಯೂಸ್

Latest Posts

Featured Videos