ಭೀಕರ ಅಪಘಾತ

ಭೀಕರ ಅಪಘಾತ

ಕಲಬುರಗಿ, ಆ. 27: ಲಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಐವರು ಸಾವನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸಾವಳಗಿ ಕ್ರಾಸ್ ಬಳಿ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೊಲ್ಲಾಪುರ ಜಿಲ್ಲೆಯ ಸಿಂಗಾಪುರ ಗ್ರಾಮದ ಸಂಜಯ್ ಕುಮಾರ್(29) ಆತನ ಪತ್ನಿ ರಾಣಿ ಸಂಜಯ್ ಕುಮಾರ್ (26), ಭಾಗ್ಯಶ್ರೀ ಭೀಮಾಶಂಕರ(22), ಸಂಜಯ್ ಕುಮಾರ್(3), ಧೀರಜ್(2) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಶಿವರಾಜ್, ಶೀತಲ್ ಮತ್ತು ಭೀಮಾ ಶಂಕರ್ ಎಂದು ಗುರುತಿಸಲಾಗಿದೆ.

ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos