ಕಾಡಾನೆಗಳು ಪ್ರತ್ಯೇಕ್ಷ

ಕಾಡಾನೆಗಳು ಪ್ರತ್ಯೇಕ್ಷ

ರಾಮನಗರ,  ಜು.  16 :  ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ 7 ಕಾಡಾನೆಗಳ ತಂಡ ಬೀಡುಬಿಟ್ಟಿವೆ.   ಗ್ರಾಮದ ರೈತರ ಜಮೀನುಗಳಲ್ಲಿ ಫಸಲು ತಿಂದಿರುವ ಕಾಡಾನೆಗಳು, ಮುಂಜಾನೆಯಾದರೂ ಕಾಡಿಗೆ ಮರಳದೆ ಕೆರೆಯಲ್ಲಿಯೇ ಬೀಡುಬಿಟ್ಟಿವೆ.
ಕಾಡಾನೆಗಳ ತಂಡ ನೋಡಲು ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ ಸಾರ್ವಜನಿಕರು ಮುಗಿ ಬಿದ್ದಿದ್ದಾರೆ.  ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಆನೆಗಳ ತಂಡವನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos