ಕಡಲ ತಡಿಯಲ್ಲಿ ತಲ್ವಾರ್ ಸದ್ದು

ಕಡಲ ತಡಿಯಲ್ಲಿ ತಲ್ವಾರ್ ಸದ್ದು

ಮಂಗಳೂರು, ಸೆ. 25 : ಕಡಲ ತಡಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದೆ. ಮಾನಸಿಕ ಅಸ್ವಸ್ಥ ಯುವಕ ಕೈಯಲ್ಲಿ ತಲ್ವಾರ ಹಿಡ್ಕೊಂಡು ರಸ್ತೆಯಲ್ಲಿ ಬೀಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಣ್ಚತ್ತಾರು ನಡೆದಿದೆ.
ಅವಿನಾಶ್ ತಲ್ವಾರ್ ಬೀಸಿದ ಯುವಕ. ಪುಣ್ಚತ್ತಾರು ಗ್ರಾಮದ ನಿವಾಸಿ. ಪೇಟೆಯ ಸುತ್ತ ತಲವಾರು ಝಳಪಿಸುತ್ತಾ ಸಾರ್ವಜನಿಕರ ಆತಂಕಕ್ಕೆ ಕಾರಣ. ಅವಿನಾಶ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಹಾಗೂ ಪೋಲೀಸರು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪೊಲೀಸ್ ಜೀಪಿನ ಬಳಿಗೂ ಬಂದು ಈತ ತಲ್ವಾರ್ ಬೀಸಿದ್ದು, ಬಳಿಕ ಪೊಲೀಸರು ಹಾಗೂ ಸ್ಥಳೀಯರು ಉಪಾಯದಿಂದ ಹಿಡಿದು ಮಂಗಳೂರಿನ ಕಂಕನಾಡಿ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos