ಕಾಡಾನೆಯ ಕಸರತ್ತು ನೋಡಿ

ಕಾಡಾನೆಯ ಕಸರತ್ತು ನೋಡಿ

ಬೆಂಗಳೂರು, ಜೂ. 24: ಇತ್ತಿಚಿನ ದಿನಗಳಲ್ಲಿ ಕಾಡಾನೆಯ ಹಾವಳಿ ದಿನೆ ದಿನೆ ಜಾಸ್ತಿಯಾಗುತ್ತಿದು, ಇದರಿಂದ ಜನರ ಪಾಡು ನೋಡಲು ಆಗುತ್ತಿಲ್ಲ. ಹೌದು, ಕಾಡಾನೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡ ಹಾಕಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಕಾಡಾನೆಯೊಂದು ಕಬ್ಬನ್ನು ತಿಂದ ಘಟನೆ ನಡೆದಿದೆ.

ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ. ಚಾಮರಾಜನಗರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಕಬ್ಬು ತುಂಬಿದ ಲಾರಿ ಸಾಗಿದ್ದು ತಮಿಳುನಾಡಿನ ಹಾಸನೂರು ಗೇಟ್ ಬಳಿ ಬರುತ್ತಿದ್ದಂತೆ ಕಾಡಾನೆ ಅಡ್ಡ ಬಂದಿದೆ.

ರಸ್ತೆ ಬದಿಯೇ ನಿಂತಿದ್ದ ಕಾಡಾನೆ ಕಬ್ಬು ತುಂಬಿದ ಲಾರಿ ಬರುತ್ತಿದ್ದಂತೆ ಅಡ್ಡಗಟ್ಟಿದೆ. ಆನೆ ಕಂಡು ಗಾಬರಿಯಾದ ಚಾಲಕ ಲಾರಿಯನ್ನು ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ. ಈ ವೇಳೆ ಕಾಡಾನೆ ಲಾರಿಯಲ್ಲಿದ್ದ ಕಬ್ಬನ್ನು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ತಿಂದು ನಂತರದಲ್ಲಿ ಅಲ್ಲಿಂದ ತೆರಳಿದೆ. ಘಟನೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos